Select Your Language

Notifications

webdunia
webdunia
webdunia
webdunia

ಯಶ್, ದರ್ಶನ್ ಗೆ ಟಾಂಗ್ ನೀಡಿದ MLC

ಯಶ್, ದರ್ಶನ್ ಗೆ ಟಾಂಗ್ ನೀಡಿದ MLC
ಮಂಡ್ಯ , ಭಾನುವಾರ, 14 ಏಪ್ರಿಲ್ 2019 (19:19 IST)
ಮಂಡ್ಯದಲ್ಲಿ ನಮಗೆ ಹಿನ್ನಡೆ ಯಾಗುವ ಪ್ರಶ್ನೆಯೇ ಇಲ್ಲ. ನಾನು ಒಂದು ನ್ಯೂಸ್ ಚಾನೆಲ್ ಎಪಿಸೋಡ್ ಬಗ್ಗೆ ಕೇಳಿದ ಪ್ರಶ್ನೆಗೆ ಸುಮಲತಾ ಮಂಡ್ಯ ಗೌಡ್ತಿ ಅಲ್ಲ ಎಂದಷ್ಟೇ ಹೇಳಿದ್ದೆ. ಅದನ್ನು ಎಡಿಟ್ ಮಾಡಲಾಗಿದೆ. ಅಂತ ವಿಧಾನ ಪರಿಷತ್ ಸದಸ್ಯ ಹೇಳಿದ್ದಾರೆ.

ಹಾಸನದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿಕೆ ನೀಡಿದ್ದು, ನಿಖಿಲ್ ಕುಮಾರ್ ದೊಡ್ಡ ಬಹುಮತದಿಂದ ಗೆಲ್ಲುತ್ತಾರೆ. ಸುಮಲತಾ ಪಕ್ಷೇತರ ಅಭ್ಯರ್ಥಿ ಯಾಗಿರುವುದು ನಮಗೆ ಲಾಭ ಎಂದರು.

webdunia
ಇನ್ನು ಜೆಡಿಎಸ್ ತಲಸ್ಪರ್ಶಿ ಪ್ರಚಾರ ಮಾಡುತ್ತಿದೆ. ಸಿನಿಮಾನೇ ಬೇರೆ, ರಾಜಕಾರಣವೇ ಬೇರೆ ಅಂತ ದರ್ಶನ್, ಯಶ್ ಪ್ರಚಾರದ ಬಗ್ಗೆ ಕೆಟಿಎಸ್ ಟಾಂಗ್ ನೀಡಿದ್ರು.

ನೋವು ನಲಿವುಗಳಿಗೆ ಯಾರು ಸ್ಪಂದಿಸುತ್ತಾರೋ ಅವರ ಪರ ಜನ ಇರುತ್ತಾರೆ ಅಂತ ಪರೋಕ್ಷವಾಗಿ ಜೋಡೆತ್ತುಗಳ ಪ್ರಚಾರ ಯಾವುದೇ ಪರಿಣಾಮ ಬೀರದು ಅಂತ ಹೇಳಿದ್ರು.

ಹಾಗಿದ್ದರೆ ಅಂಬರೀಷಣ್ಣ ಸೋಲುತ್ತಿರಲಿಲ್ಲ. ಹೀಗಾಗಿ ಮಂಡ್ಯದಲ್ಲಿ ನಿಖಿಲ್ ಕುಮಾರ್ ಗೆ ಮತ್ತು ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಬೆಂಬಲಿಸುವಂತೆ ಮನವಿ ಮಾಡಿದ್ರು.


Share this Story:

Follow Webdunia kannada

ಮುಂದಿನ ಸುದ್ದಿ

ನಿಖಿಲ್ ಎಲ್ಲಿದ್ದೀಯಪ್ಪಾ ಟ್ರೋಲ್ ಗೆ ಸಿಎಂ ಕೊಟ್ಟ ಉತ್ತರ ಏನ್ಗೊತ್ತಾ?