Webdunia - Bharat's app for daily news and videos

Install App

ಮೊಬೈಲ್ ಮೋಹ ಪ್ರಾಣ ಕಳೆದುಕೊಂಡ ಯುವಕ

Webdunia
ಭಾನುವಾರ, 30 ಜನವರಿ 2022 (18:04 IST)
ಮೊಬೈಲ್ ಮೇಲೆ ಇರುವ ಮೋಹಕ್ಕೆ ಯುವಕನೊಬ್ಬ ಪ್ರಾಣ ಬಿಟ್ಟಿರುವ ಘಟನೆ ನಡೆದಿರೋದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮಚಾಯ್ತಿ ವ್ಯಾಪ್ತಿಯ ಗುಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
 
ಗುಡಿಹಳ್ಳಿ ಗ್ರಾಮದ ನಿವಾಸಿ ನವೀನ್ ಮೊಬೈಲ್ ಮೋಹಕ್ಕೆ ಪ್ರಾಣತೆತ್ತ ಯುವಕ. ನವೀನ್ ತನ್ನ ತೋಟದಲ್ಲಿದ್ದ ಮಿಷನ್ ಶೆಡ್ ಮೋಟಾರ್ ಆನ್ ಮಾಡಲು ಹೋಗಿದ್ದಾಗ ತನ್ನ ಕೈಯಲ್ಲಿದ್ದ ಮೊಬೈಲ್ ಜಾರಿ ಶೆಡ್ ಒಳಗಡೆ ಇದ್ದ ಕಿರು ಕೊಳವೇ ಬಾವಿಯ ಒಳಗಡೆ ಬಿದ್ದಿದ್ದೆ. ಹೇಗಾದರೂ ಮಾಡಿ ಮೊಬೈಲ್ ಹೊರಗಡೆ ತೆಗೆಯಬೇಕೆಂದು ಮನೆಗೆ ಹೋಗಿ ಬ್ಯಾಟರಿ ತಂದು ಬಾವಿಯೊಳಗೆ ಇಳಿದಿದ್ದಾನೆ. 65 ಅಡಿ ಆಳ ಇದ್ದ ಬಾವಿಗೆ ಇಳಿದ ನವೀನ್ ಮೇಲೆ ಬರಲೇ ಇಲ್ಲ. ಟಾರ್ಚ್ ತಗೊಂಡು ಹೋದವನು ಮನೆಗೆ ಬರಲೇ ಇಲ್ಲ ಅಂತ ತನ್ನ ಅಣ್ಣ ಅನುಮಾನಗೊಂಡು ಬಾವಿಯ ಬಳಿ ಬಿಟ್ಟಿದ್ದ ಚಪ್ಪಲಿ ಕಂಡು ಗಾಬರಿಯಾಗಿದ್ದಾನೆ.
 
ತಕ್ಷಣ ಬಾವಿಗೆ ಇಳಿಯುವ ಪ್ರಯತ್ನ ಮಾಡಿದ್ದಾನೆ ಆದರೆ ಹುಸಿರುಗಟ್ಟಿದ್ರಿಂದ ಮೇಲೆ ಬಂದಿದ್ದಾನೆ, ಕೂಡಲೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಮುಟ್ಡಿಸಿದ್ದಾರೆ.
 
ರಾತ್ರಿಯೆಲ್ಲ ಕಾರ್ಯಾಚರಣೆ ಮಾಡಿದ ಅಗ್ನಿಶಾಮಕ ದಳದಿಂದ ಯುವಕ‌ನ್ನು ಹೊರ ತೆಗೆಯಲು ವಿಫಲವಾಗಿದೆ,ಕೊನೆಗೆ ಬೆಂಗಳೂರಿನಿಂದ ಎನ್ ಡಿ ಆರ್ ಎಫ್ ತಂಡ ಬಂದು ಇಂದು ಮುಂಜಾನೆ ನಾಲ್ಕು ಸಮಯಕ್ಕೆ ಸರಿಯಾಗಿ ಯುವನ ಮೃತದೇಹ ಹೊರಗೆ ತೆಗೆದು ತನ್ನ ಕುಟುಂಭಸ್ಥರಿಗೆ ಒಪ್ಪಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು ನೈರುತ್ಯ ರೈಲ್ವೆ ವ್ಯಾಪ್ತಿಗೆ: ಕೇರಳ ಅಡ್ಡಗಾಲು ಬೆನ್ನನ್ನೇ ಡಿಕೆ ಶಿವಕುಮಾರ್‌ಗೆ ಬ್ರಿಜೇಶ್ ಚೌಟ ಪತ್ರ

ಮೊಬೈಲ್ ಕೊಡಲಿಲ್ಲವೆಂದು ಸಹೋದರಿಯನ್ನು ಕೊಂದಿದ್ದ ತಮ್ಮನಿಗೆ 4ವರ್ಷದ ಬಳಿಕ ತೀರ್ಪು ಪ್ರಕಟ

ರಾಜಧಾನಿಯ ಅರ್ಹ ಮಹಿಳೆಯರಿಗೆ ತಿಂಗಳಿಗೆ ₹2,500

ಯಾರಿಂದಲೂ ಇನ್ನೊಬ್ಬರ ನಾಯಕತ್ವವನ್ನು ತಪ್ಪಿಸೋಕೆ ಸಾಧ್ಯವಿಲ್ಲ: ಸತೀಶ್ ಜಾರಕಿಹೊಳಿ

Toxic Cinema: ರುಕ್ಮಿಣಿ ನಿಮ್ಮಿಂದ ಇದನ್ನು ನಾನು ನಿಜವಾಗಿಯೂ ನಿರೀಕ್ಷಿಸಿರಲಿಲ್ಲ

ಮುಂದಿನ ಸುದ್ದಿ
Show comments