ಉಪವಾಸ ಮುಗಿದ ತಕ್ಷಣ ಏನನ್ನು ಸೇವಿಸಬೇಕು ಮತ್ತು ಸೇವಿಸಬಾರದು

Krishnaveni K
ಮಂಗಳವಾರ, 30 ಸೆಪ್ಟಂಬರ್ 2025 (11:06 IST)
ಹಬ್ಬ ಹರಿದಿನಗಳಲ್ಲಿ ವ್ರತ ಮಾಡುವ ಸಲುವಾಗಿ ಉಪವಾಸ ಮಾಡುವವರು ಅನೇಕರಿದ್ದಾರೆ. ಉಪವಾಸ ಮುಗದ ತಕ್ಷಣ ಯಾವ ಆಹಾರ ಸೇವನೆ ಮಾಡಬೇಕು, ಯಾವುದನ್ನು ಸೇವನೆ ಮಾಡಬಾರದು ಇಲ್ಲಿದೆ ನೋಡಿ ವಿವರ.

ಉಪವಾಸ ಎನ್ನುವುದು ನಮ್ಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಒಮ್ಮೆ ರಿಫ್ರೆಶ್ ಮಾಡಿದಂತೆ. ಕೆಲವರು ಕೇವಲ ನೀರು ಮಾತ್ರ ಸೇವನೆ ಮಾಡಿಕೊಂಡು ದಿನವಿಡೀ ಉಪವಾಸ ಮಾಡುತ್ತಾರೆ. ಕೆಲವರು ಕೇವಲ ಹಣ್ಣು ಹಂಪಲುಗಳನ್ನು ಸೇವನೆ ಮಾಡುತ್ತಾರೆ. ಇದು ಅವರವರ ಭಕ್ತಿ-ಭಾವಕ್ಕೆ ಬಿಟ್ಟಿ ವಿಚಾರ. ಆದರೆ ಉಪವಾಸ ಮುಗಿದ ಬಳಿಕ ಏನು ಸೇವನೆ ಮಾಡಬೇಕು, ಮಾಡಬಾರದು ಎಂಬುದನ್ನು ತಿಳಿಯಬೇಕಾಗಿರುವುದು ಅಗತ್ಯ.

ಏನು ಸೇವನೆ ಮಾಡಬೇಕು?
ಉಪವಾಸದ ಸಂದರ್ಭದಲ್ಲಿ ಕೆಲವು ಹೊತ್ತು ಘನ ಆಹಾರಗಳನ್ನು ಸೇವನೆ ಮಾಡದೇ ನಿಮ್ಮ ಜೀರ್ಣಾಂಗ ವ್ಯವಸ್ಥೆ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಉಪವಾಸ ಮುಗಿದ ತಕ್ಷಣ ಘನ ಆಹಾರ ಸೇವನೆ ಮಾಡದೇ ಯಾವುದಾದರೂ ಲಘು ಉಪಹಾರ ಅಥವಾ ಸುಲಭವಾಗಿ ಜೀರ್ಣವಾಗುವ ಆಹಾರ ಸೇವನೆ ಮಾಡಬೇಕು. ಉದಾಹರಣೆ ಹಣ್ಣಿನ ರಸ, ಜ್ಯೂಸ್, ಮೊಸರು, ಮೊಟ್ಟೆಯ ಹಳದಿ ಭಾಗ, ಅವಕಾಡೊ ಹಣ್ಣು, ತರಕಾರಿ ಸೂಪ್ ಇತ್ಯಾದಿ ಮಾತ್ರ ಸೇವನೆ ಮಾಡಿ.

ಏನನ್ನು ಸೇವನೆ ಮಾಡಬಾರದು?
ಕ್ಯಾಂಡಿ, ಪೇಸ್ಟ್ರಿ, ಕೇಕ್ ನಂತಹ ಸಂಸ್ಕರಿತ ಆಹಾರಗಳು, ಪಾನೀಯ, ಅತಿಯಾದ ಕೊಬ್ಬು ಇರುವ, ಕರಿದ ತಿಂಡಿಗಳು, ಚಿಪ್ಸ್, ಪಾಸ್ತಾ, ಬೆಳ್ತಿಗೆ ಅನ್ನ, ಬ್ರಾಕೊಲಿ, ಕ್ಯಾಬೇಜ್ ನಂತಹ ಹಸಿ ತರಕಾರಿಗಳು, ಚಿಲ್ ಮಾಡಿದ ಆಹಾರ ವಸ್ತುಗಳು, ಕಾಫಿ, ಮದ್ಯ, ಹಾಟ್ ಡ್ರಿಂಕ್ಸ್ ಯಾವುದನ್ನೂ ಸೇವನೆ ಮಾಡದೇ ಇರುವುದು ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರ ರಾಜಧಾನಿಯಲ್ಲಿ ಇಂದು ಎಷ್ಟು ಇಂಡಿಗೋ ವಿಮಾನ ಹಾರಾಟ ರದ್ದು ಗೊತ್ತಾ

Big Shocking: ರಾಜ್ಯದಲ್ಲಿ ಕ್ಯಾನ್ಸರ್ ಪ್ರಕರಣದಲ್ಲಿ ಹೆಚ್ಚಳ

ಬಿಜೆಪಿ ಚುನಾವಣೆಗಾಗಿ, ನಾವು ದೇಶಕ್ಕಾಗಿ: ಪ್ರಿಯಾಂಕಾ ಗಾಂಧಿ ಕಿಡಿ

ಗುಜರಾತ್ ಸರ್ಕಾರ ರೈತರ ಮೇಲೆ ಲಾಠಿ ಚಾರ್ಜ್ ಮಾಡಿದೆ: ಅರವಿಂದ್ ಕೇಜ್ರಿವಾಲ್

ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸೂರ್ಯಕುಮಾರ್ ಯಾದವ್

ಮುಂದಿನ ಸುದ್ದಿ
Show comments