Webdunia - Bharat's app for daily news and videos

Install App

Karnataka Caste census: ಜಾತಿಗಣತಿ ಮಾಡಲು ಯಾಕೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತದೆ, ಇಲ್ಲಿದೆ ಸೀಕ್ರೆಟ್

Krishnaveni K
ಗುರುವಾರ, 12 ಜೂನ್ 2025 (09:28 IST)
Photo Credit: AI Image
ಬೆಂಗಳೂರು: ರಾಜ್ಯ ಸರ್ಕಾರ ಈಗ ಹೈಕಮಾಂಡ್ ಅಣತಿಯಂತೆ ಮತ್ತೊಮ್ಮೆ ಜಾತಿಗಣತಿ ಮಾಡಲು ಹೊರಟಿದೆ. ಆದರೆ ಜಾತಿಗಣತಿ ಅಂದರೆ ಸುಮ್ಮನೇ ಅಲ್ಲ. ಇದಕ್ಕೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತದೆ. ಯಾಕೆ ಖರ್ಚಾಗುತ್ತದೆ ಇಲ್ಲಿದೆ ನೋಡಿ ವಿವರ.

10 ವರ್ಷಗಳ ಹಿಂದೆ ರಾಜ್ಯ ಸರ್ಕಾರ ಸಮಿತಿ ರಚಿಸಿ ಜಾತಿಗಣತಿ ಮಾಡಿದಾಗ ಅದಕ್ಕೆ 180 ಕೋಟಿ ರೂ. ಖರ್ಚಾಗಿದೆ ಎನ್ನಲಾಗುತ್ತದೆ. ಇದೀಗ ಮತ್ತೊಮ್ಮೆ ಜಾತಿಗಣತಿ ಮಾಡಲು 300 ಕೋಟಿ ರೂ.ವರೆಗೆ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಅಷ್ಟಕ್ಕೂ ಜಾತಿಗಣತಿಗೆ ಯಾಕೆ ಇಷ್ಟೊಂದು ಖರ್ಚು ಎಂದು ನಿಮಗೆ ಅಚ್ಚರಿಯಾಗಬಹುದು.

ಅಧಿಕಾರಿಗಳ ನೇಮಕ
ಜಾತಿಗಣತಿ ಮಾಡಲು ಪ್ರತಿಯೊಂದು ಮನೆಗೆ ಹೋಗಿ ಲೆಕ್ಕ ಪಡೆಯಬೇಕಾಗುತ್ತದೆ. ಇದಕ್ಕೆ ಅಧಿಕಾರಿಗಳನ್ನು ನೇಮಿಸಬೇಕಾಗುತ್ತದೆ. ಅವರಿಗೆ ವೇತನ ನೀಡಲು ಖರ್ಚು ವೆಚ್ಚವಾಗುತ್ತದೆ.

ಅಧಿಕಾರಿಗಳಿಗೆ ಸೌಲಭ್ಯ
ಜಾತಿ ಗಣತಿ ಮಾಡಲು ತೆರಳುವ ಸಿಬ್ಬಂದಿಗಳಿಗೆ ವಾಹನ ಸೌಲಭ್ಯ ಬೇಕಾಗಿದ್ದಲ್ಲಿ, ಊಟೋಪಚಾರ, ಕಂಪ್ಯೂಟರ್, ಡಿಜಿಟಲ್ ಸೌಲಭ್ಯಕ್ಕಾಗಿ ಖರ್ಚು ವೆಚ್ಚವಾಗುತ್ತದೆ.

ಆನ್ ಲೈನ್ ಖರ್ಚುಗಳು
ಒಂದು ವೇಳೆ ಆನ್ ಲೈನ್ ಮೂಲಕ ಗಣತಿ ಮಾಡುವುದಿದ್ದರೆ ಪ್ರತ್ಯೇಕ ಆಪ್ ನಿರ್ಮಿಸಲು, ಅದರ ದತ್ತಾಂಶಗಳನ್ನು ಸಂಗ್ರಹಿಸಲು ಐಟಿ ಮೂಲಭೂತಸೌಕರ್ಯ ಒದಗಿಸಲು ಖರ್ಚು ವೆಚ್ಚಗಳಾಗುತ್ತವೆ. ಇದನ್ನು ನಿರ್ವಹಿಸಲು ನುರಿತ ಸಿಬ್ಬಂದಿಗಳನ್ನು ನೇಮಿಸಬೇಕಾಗುತ್ತದೆ.

ಕಾಗದ ಪತ್ರಗಳ ಮುದ್ರಣ
ಒಂದು ವೇಳೆ ಫಾರಂ ಫಿಲ್ ಮಾಡುವ ಪದ್ಧತಿಯಾಗಿದ್ದರೆ ಅದನ್ನು ಪ್ರಿಂಟ್ ಮಾಡಲು, ದಾಖಲೆಗಳನ್ನು ತಯಾರಿ ಮಾಡಲು ಖರ್ಚು ವೆಚ್ಚಗಳಾಗುತ್ತವೆ.

ಜಾಹೀರಾತುಗಳು
ಸಾರ್ವಜನಿಕರಲ್ಲಿ ಜಾತಿಗಣತಿ ಬಗ್ಗೆ ಅರಿವು ಮೂಡಿಸಲು ಸೋಷಿಯಲ್ ಮೀಡಿಯಾ ಸಂದೇಶ, ಜಾಹೀರಾತುಗಳನ್ನು ನಿರ್ಮಿಸಬೇಕಾಗುತ್ತದೆ. ಇದಕ್ಕೆ ಖರ್ಚು ವೆಚ್ಚಗಳಾಗುತ್ತವೆ.

ಇವೆಲ್ಲದರ ಜೊತೆಗೆ ಸಂಗ್ರಹಿಸಿದ ದಾಖಲೆಗಳನ್ನು ಒಟ್ಟುಗೂಡಿಸಿ ಅವುಗಳ ಮಾಹಿತಿಯ ಅನ್ವಯ ವರದಿ ತಯಾರಿಸುವುದು, ಅದನ್ನು ಸಂಗ್ರಹಿಸಿಡಲು ಸೂಕ್ತ ವ್ಯವಸ್ಥೆ ಮಾಡಬೇಕಾಗುತ್ತದೆ. ಇದೆಲ್ಲವೂ ವೆಚ್ಚದಾಯಕವಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತ: ಪ್ರಾಣ ಉಳಿಸಿಕೊಳ್ಳಲು ಬಿಲ್ಡಿಂಗ್‌ನಿಂದ ವಿದ್ಯಾರ್ಥಿಗಳು ಹಾರುತ್ತಿರುವ ಭೀಕರ ವಿಡಿಯೋ ವೈರಲ್‌

ಶೀಘ್ರದಲ್ಲೇ ನಿವೃತ್ತಿ ಪಡೆಯುವುದಾಗಿ ಹೇಳಿದ್ದ: ಕ್ಯಾಪ್ಟನ್ ಸುಮೀತ್‌ ಸಬರ್ವಾಲ್‌ಗೆ ತಂದೆಯ ಕಣ್ಣೀರ ಅಂತಿಮ ವಿದಾಯ

ರಾತೋರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರ ಭೇಟಿ: ತನಿಖೆಗೆ ಆದೇಶ

ಬಾಂಬ್‌ ಬೆದರಿಕೆ: ನಾಗ್ಪುರ ಏರ್‌ಪೋರ್ಟ್‌ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಲಂಡನ್ ಬೆನ್ನಲ್ಲೇ ಪ್ಯಾರಿಸ್‌ಗೆ ನಿಗದಿಯಾಗಿದ್ದ ಏರ್‌ ಇಂಡಿಯಾ ವಿಮಾನ ರದ್ದು

ಮುಂದಿನ ಸುದ್ದಿ
Show comments