Webdunia - Bharat's app for daily news and videos

Install App

ಇಂಡೋನೇಷ್ಯಾ ಏಷ್ಯಾದ ಕೋವಿಡ್ ಹಾಟ್ಸ್ಪಾಟ್!

Webdunia
ಗುರುವಾರ, 15 ಜುಲೈ 2021 (09:21 IST)
ಜಕಾರ್ತಾ(ಜು.15): 2 ದಿನಗಳಿಂದ ನಿತ್ಯ 40000ಕ್ಕಿಂತ ಹೆಚ್ಚು ಹೊಸ ಕೊರೋನಾ ಸೋಂಕು ದಾಖಲಾಗುವ ಮೂಲಕ ದೈನಂದಿನ ಸೋಂಕಿನ ಪ್ರಮಾಣದಲ್ಲಿ ಇಂಡೋನೇಷ್ಯಾ, ಭಾರತವನ್ನು ಹಿಂದಿಕ್ಕಿದೆ. ಜೊತೆಗೆ ಡೆಲ್ಟಾವೈರಸ್ ಹಾವಳಿಯಿಂದಾಗಿ ‘ಏಷ್ಯಾದ ಹೊಸ ಕೊರೋನಾ ಹಾಟ್ಸ್ಟಾಟ್’ ಆಗಿ ಹೊರಹೊಮ್ಮವು ಭೀತಿ ಎದುರಾಗಿದೆ.


* ಡೆಲ್ಟಾಹಾವಳಿ: ದೈನಂದಿನ ಕೇಸಲ್ಲಿ ಭಾರತ ಹಿಂದಿಕ್ಕಿದ ಇಂಡೋನೇಷ್ಯಾ
* ಇಂಡೋನೇಷ್ಯಾ ಈಗ ಏಷ್ಯಾದ ಕೋವಿಡ್ ಹಾಟ್ಸ್ಪಾಟ್
* ಸತತ 2 ದಿನಗಳಿಂದ ನಿತ್ಯ 40000ಕ್ಕಿಂತ ಹೆಚ್ಚು ಕೇಸು
* ಸತತ 7 ದಿನಗಳಿಂದ ಸರಾಸರಿ ನಿತ್ಯ 907 ಜನರ ಸಾವು

ತಿಂಗಳ ಹಿಂದೆ ಇಂಡೋನೇಷ್ಯಾದಲ್ಲಿ ನಿತ್ಯ 10000 ಕೇಸು ದಾಖಲಾಗುತ್ತಿದ್ದು, ಸರಾಸರಿ 181 ಜನರು ಸಾವನ್ನಪ್ಪುತ್ತಿದ್ದರು. ಆದರೆ ಸೋಂಕಿನ ಪ್ರಮಾಣ ಸತತ 2 ದಿನ 40000ದ ಗಡಿ ದಾಟಿದೆ. ಮಂಗಳವಾರ 33000 ಕೇಸು, ಬುಧವಾರ 47899 ಕೇಸು ದಾಖಲಾಗಿವೆ. ಇನ್ನು ಸತತ 7 ದಿನಗಳಿಂದ ದೇಶದಲ್ಲಿ ಸಾವಿನ ಪ್ರಮಾಣ ಭಾರೀ ಏರಿಕೆ ಕಂಡಿದ್ದು, ನಿತ್ಯ ಸರಾಸರಿ 907 ಸಾವು ದಾಖಲಾಗುತ್ತಿದೆ.
ಡೆಲ್ಟಾಉಪ ಪ್ರಬೇಧ ಅಪಾಯಕಾರಿ ಅಲ್ಲ

ಡೆಲ್ಟಾ ರೂಪಾಂತರಿ ವೈರಸ್ನಂತೆ ಅದರ ಉಪ ಪ್ರಬೇಧಗಳಾದ ಎವೈ.1 ಮತ್ತು ಎವೈ.2 ವೇಗವಾಗಿ ಹರಡುವ ಸಾಧ್ಯತೆ ಕಡಿಮೆ ಎಂದು ಸರ್ಕಾರದಿಂದ ರಚನೆಯಾಗಿರುವ ಕೊರೋನಾ ವೈರಸ್ ಜಿನೋಮ್ ಸೀಕ್ವೆನ್ಸ್ ಸಮಿತಿ ತಿಳಿಸಿದೆ. ತನ್ನ ಇತ್ತೀಚಿನ ವರದಿಯಲ್ಲಿ ‘ಎವೈ.3 ಎನ್ನುವ ಡೆಲ್ಟಾದ ಮತ್ತೊಂದು ಪ್ರಬೇಧ ಗುರುತಿಸಲಾಗಿದೆ. ಅಮೆರಿಕದಲ್ಲಿ ಇದು ಮೊದಲು ಪತ್ತೆಯಾಗಿದ್ದು, ನಂತರ ಬ್ರಿಟನ್, ಭಾರತದಲ್ಲೂ ಪತ್ತೆಯಾಗಿದೆ. ಈ ವೈರಸ್ ಬಗ್ಗೆ ನಿಗಾ ವಹಿಸಲಾಗಿದೆ’ ಎಂದು ತಿಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆಶಿಗೆ ಕ್ಯಾರೇ ಎನ್ನದ ಸಿದ್ದು, ಭುಗಿಲೆದ್ದ ಕಾಂಗ್ರೆಸ್ ಅಂತಃಕಲಹ, ಸೆಪ್ಟೆಂಬರ್‌ನಲ್ಲಿ ಮುಹೂರ್ತ ಫಿಕ್ಸ್: ಬಿಜೆಪಿ

ರಾಜ್ಯದ ಸಣ್ಣ ವ್ಯಾಪಾರಸ್ಥರ ಹಿತರಕ್ಷಣೆಗೆ ಬಿಜೆಪಿ ಸಹಾಯವಾಣಿ - ಛಲವಾದಿ ನಾರಾಯಣಸ್ವಾಮಿ

ಡಿಕೆಶಿ ಕುರ್ಚಿ ಕಸಿದುಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದರೆ ಮನೆಯಲ್ಲಿ ಕೂರಿಸುವ ಎಚ್ಚರಿಕೆ ಕೊಟ್ರಾ ಸಿದ್ದರಾಮಯ್ಯ: ಆರ್ ಅಶೋಕ್‌

ಆರ್‌ಸಿಬಿ ಕಾಲ್ತುಳಿತ ಪ್ರಕರಣ, ಅಮಾಯಕರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಲ್ಲ: ಆರ್‌ ಅಶೋಕ್‌

ತುರ್ತು ನಿರ್ವಹಣಾ ಕಾಮಗಾರಿ: ಬೆಂಗಳೂರಿನ ಈ ಭಾಗದಲ್ಲಿ ಜು.21, 22ರಂದು ವಿದ್ಯುತ್ ವ್ಯತ್ಯಯ

ಮುಂದಿನ ಸುದ್ದಿ
Show comments