ನೆನಪಿನ ಶಕ್ತಿ ಹೆಚ್ಚಿಸಲು ಡಾ ನಾ ಸೋಮೇಶ್ವರವರ ಸಿಂಪಲ್ ಟ್ರಿಕ್ಸ್

Krishnaveni K
ಗುರುವಾರ, 4 ಸೆಪ್ಟಂಬರ್ 2025 (13:13 IST)
Photo Credit: Instagram
ಬಹುತೇಕ ವಿದ್ಯಾರ್ಥಿಗಳದ್ದು ಓದಿದ್ದು ನೆನಪಿನಲ್ಲಿ ಉಳಿಯಲ್ಲ ಎನ್ನುವುದೇ ದೊಡ್ಡ ಪ್ರಾಬ್ಲಂ. ನೆನಪಿನ ಶಕ್ತಿ ಹೆಚ್ಚಿಸಲು ಏನು ಮಾಡಬೇಕು ಎಂಬುದನ್ನು ಥಟ್ ಅಂತ ಹೇಳಿ ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿರುವ ಡಾ ನಾ ಸೋಮೇಶ್ವರ ಅವರು ಸಂವಾದವೊಂದರಲ್ಲಿ ಹೇಳಿದ್ದರು.

ಕೆಲವು ಮಕ್ಕಳು ರಾಂಕ್ ಬರುತ್ತಾರೆ, ಮತ್ತೆ ಕೆಲವರು ಪಾಸ್ ಮಾಡಲು ಕಷ್ಟಪಡುತ್ತಾರೆ. ಇದಕ್ಕೆ ಕಾರಣ, ಮಗು ಬೆಳೆಯುವ ವಾತಾವರಣ, ಕಲಿಕೆಯ ವಿಧಾನ. ಪರಿಸರ ಎಂದರೆ ಮನೆಯ ಪರಿಸರ, ಶಾಲಾ ಪರಿಸರ ಮತ್ತು ಸಮಾಜ ಅಥವಾ ಗೆಳೆಯರ ಪರಿಸರ. ಇದು ಮೂರು ಚೆನ್ನಾಗಿರಬೇಕು. ಮನೆಯ ಸದಸ್ಯರಿಗೆ ಓದುವ ಅಭ್ಯಾಸವಿರಬೇಕು. ನಿಮ್ಮ ಶಾಲೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ವಿಚಾರಗಳಿಗೂ ಅವಕಾಶ ಕೊಡುವಂತಹ ಕ್ರಿಯಾತ್ಮಕ ಪರಿಸರ ಇರಬೇಕು.

ಮೂರನೆಯದು ನಿಮ್ಮ ಗೆಳೆಯರ ಪರಿಸರ. ಓದಿನ ಬಗ್ಗೆ ಆಸಕ್ತಿ ಇರುವ ಗೆಳೆಯರ ಜೊತೆ ಒಡನಾಡಿದರೆ ನಿಮಗೂ ಓದಿನಲ್ಲಿ ಆಸಕ್ತಿ ಬರುತ್ತದೆ. ಇದು ನಿಮ್ಮ ಬುದ್ಧಿವಂತಿಕೆಯನ್ನು ನಿರ್ಧರಿಸುತ್ತದೆ.

ಮಿದುಳಿಗೆ ಒಂದು ಹುಟ್ಟು ಗುಣವಿದೆ. ಹಿತವಾದದ್ದನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ. ಅಹಿತವೆನಿಸಿದರೆ ಅದನ್ನು ಸ್ವೀಕರಿಸಲ್ಲ. ಗಣಿತ ಕಷ್ಟ, ವಿಜ್ಞಾನ ಕಷ್ಟ ಎಂದು ಭಾವಿಸಿದರೆ ಅದು ಕಷ್ಟವೇ. ಯಾಕೆ ಕಷ್ಟ ನನ್ನಿಂದ ಸಾಧ್ಯ ಎಂದು ಪ್ರಯತ್ನಿಸಿದರೆ ಎಲ್ಲವೂ ಸುಲಭ. ಹೀಗಾಗಿ ನಿಮ್ಮ ವಿಷಯವನ್ನು ಇಷ್ಟಪಟ್ಟು ಓದಬೇಕು. ಇದರಿಂದ ಓದಿದ್ದು ನೆನಪಿರುತ್ತದೆ, ಇಷ್ಟವೂ ಆಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಲಸ ಹುಡುಕಿ ನಗರಕ್ಕೆ ಬಂದಿದ್ದ ಯುವಕ ಅನುಮಾನಸ್ಪದ ಸಾವು

ಬೆಳಗಾವಿ: ಮನೆಯಿಂದ ಕೊಳೆತ ವಾಸನೆ, ಬಾಗಿಲು ತೆರೆದಾಗ ಮಾಜಿ ಪತಿ ಪೊಲೀಸಪ್ಪನ ಕೃತ್ಯ ಬಟಾಬಯಲು

ರಾಜ್ಯಸಭಾ ಸದಸ್ಯರ ಅಪಾರ್ಟ್‌ಮೆಂಟ್‌ನಲ್ಲಿ ಭಾರೀ ಬೆಂಕಿ ಅವಘಡ, ನಿವಾಸಿ ಹೇಳಿದ್ದೇನು

ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಹಾನಗಲ್ ತಹಶೀಲ್ದಾರ್ ಕಚೇರಿ ಶಿರಸ್ತೆದಾರ, ಮತ್ತಿಬ್ಬರ ಬಂಧನ

ಮೊದಲ ಬಾರಿ ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಪತ್ನಿ

ಮುಂದಿನ ಸುದ್ದಿ
Show comments