Webdunia - Bharat's app for daily news and videos

Install App

ಡಾ ದೇವಿಪ್ರಸಾದ್ ಶೆಟ್ಟಿ ಪ್ರಕಾರ ಸುದೀರ್ಘ ಜೀವನ ಗುಟ್ಟು ಇದುವೇ

Krishnaveni K
ಬುಧವಾರ, 30 ಜುಲೈ 2025 (11:17 IST)

ಪ್ರತಿಯೊಬ್ಬರಿಗೂ ದೀರ್ಘಾಯುಷ್ಯ ಬೇಕು ಎಂಬ ಆಸೆಯಿರುತ್ತದೆ. ನಿಮಗೆ ಸುದೀರ್ಘ ಕಾಲ ಆರೋಗ್ಯವಂತರಾಗಿ ಬದುಕಬೇಕು ಎಂದರೆ ಇದೊಂದು ಕೆಲಸ ಮಾಡಬೇಕು ಎಂದು ಖ್ಯಾತ ಹೃದ್ರೋಗ ತಜ್ಞ ಡಾ ದೇವಿಪ್ರಸಾದ್ ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇತ್ತೀಚೆಗೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ ಎಂದರೆ ಹೃದಯಾಘಾತ. ಬಹುತೇಕ ಚಿಕ್ಕ ವಯಸ್ಸಿನವರೇ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಹಲವರಿಗೆ ಯಕ್ಷ ಪರಶ್ನೆಯಾಗಿದೆ. ಜೊತೆಗೆ ಒಂದು ರೀತಿಯ ಭಯವೂ ಸೃಷ್ಟಿಯಾಗಿದೆ.

ಹೃದಯಾಘಾತದಿಂದ ಅಕಾಲಿಕವಾಗಿ ಮರಣ ಹೊಂದಿದ ಎಷ್ಟೋ ಜನರ ಉದಾಹರಣೆ ನಮ್ಮ ಮುಂದಿದೆ. ಹೃದಯಾಘಾತವನ್ನು ತಪ್ಪಿಸಬೇಕು, ಆರೋಗ್ಯವಾಗಿ ಸುದೀರ್ಘ ಜೀವನ ನಡೆಸಬೇಕು ಎಂದರೆ ಇದೊಂದು ಕೆಲಸವನ್ನು ಮಾಡಬೇಕು ಎಂದು ಡಾ ದೇವಿಪ್ರಸಾದ್ ಶೆಟ್ಟಿ ಹೇಳಿದ್ದರು. ಅವರು ಹೇಳಿದ ಮೂರು ಅಂಶಗಳು ಇಲ್ಲಿದೆ ನೋದಿ.

ಮೊದಲನೆಯದಾಗಿ ಬೊಜ್ಜು ಎಲ್ಲದಕ್ಕೂ ಮೂಲ ಕಾರಣ. ಹೀಗಾಗಿ ಆರೋಗ್ಯಕರ ದೇಹ ತೂಕ ಹೊಂದುವುದರತ್ತ ಮೊದಲು ಗಮನಹರಿಸಬೇಕು. ಎರಡನೆಯದ್ದಾಗಿ ಪ್ರತಿನಿತ್ಯ 8000, 10000 ಸ್ಟೆಪ್ಸ್ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮೂರನೆಯದ್ದಾಗಿ ನಮ್ಮನ್ನು ಕಾಪಾಡುವ ಯಾವುದೋ ಒಂದು ಶಕ್ತಿ ಇದೆ ಎಂಬ ಸ್ಪಿರಿಚ್ಯುವಲ್ ಭಾವನೆ ನಮ್ಮಲ್ಲಿರಬೇಕು. ಇದು ಮೂರಿದ್ದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೂ ಕೊಟ್ಟ ಬಾಲಕಿಯ ಮುಗ್ದತೆಗೆ ಡಿಕೆ ಶಿವಕುಮಾರ್ ವಾಪಾಸ್ ಏನ್ ಕೊಟ್ರು ನೋಡಿ, Video

ದೆಹಲಿ: ನಗರದ ಹಲವೆಡೆ ಮಳೆ; ಭಾರೀ ಮಳೆಯಾಗುವ ಮುನ್ಸೂಚನೆ

ನೇಪಾಳ ಪ್ರವಾಹ: ಏರುತ್ತಲೇ ಇದೆ ಸಾವಿನ ಸಂಖ್ಯೆ, ಪೊಲೀಸರು ಬಿಡುಗಡೆ ಮಾಡಿದ ಸಂಖ್ಯೆಯೆಷ್ಟೂ ಗೊತ್ತಾ

ಮಧ್ಯಪ್ರದೇಶ: ವಿಷಕಾರಿ ಮಧ್ಯ ಸೇವಿಸಿ 9 ಮದ್ಯ ಮಂದಿ ಸಾವು

ಪರಂದೂರು ಯೋಜನೆ ರದ್ದು ಬೆನ್ನಲ್ಲೇ ವಿಜಯ್ ತಮಿಳು ಸರ್ಕಾರ 2 ಸ್ಥಳಗಳ ಅಂತಿಮ

ಮುಂದಿನ ಸುದ್ದಿ
Show comments