ಜಿಮ್ ಮಾಡುವವರು ಡಾ ಸಿಎನ್ ಮಂಜುನಾಥ್ ಅವರ ಈ ಸಲಹೆಯನ್ನು ತಪ್ಪದೇ ಗಮನಿಸಿ

Krishnaveni K
ಬುಧವಾರ, 9 ಜುಲೈ 2025 (09:06 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಳವಾಗುವುದಕ್ಕೆ ಅತಿಯಾದ ವರ್ಕೌಟ್ ಕೂಡಾ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಜಿಮ್ ಮಾಡುವವರು ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಅವರ ಈ ಸಲಹೆಯನ್ನು ಗಮನಿಸಿ.

ಸಂದರ್ಶನವೊಂದರಲ್ಲಿ ಡಾ ಸಿಎನ್ ಮಂಜುನಾಥ್ ಜಿಮ್ ಮಾಡುವವರಿಗೆ ಅತ್ಯಮೂಲ್ಯ ಸಲಹೆ ನೀಡಿದ್ದಾರೆ. ಹೃದಯಾಘಾತ ತಡೆಯಬೇಕು ಮತ್ತು ಹೃದಯ ಸಂಬಂಧೀ ಖಾಯಿಲೆಗಳನ್ನು ಬಾರದಂತೆ ನೋಡಿಕೊಳ್ಳಬೇಕು ಎಂದರೆ ಜಿಮ್ ಮಾಡುವವರು ಕೆಲವು ವಿಚಾರಗಳನ್ನು ತಪ್ಪದೇ ಗಮನಿಸಬೇಕು.

ಜಿಮ್ ಮಾಡುವುದು ತಪ್ಪು ಎಂದು ಯಾರೂ ಹೇಳಲ್ಲ. ಆದರೆ ನಾವು ಯಾವ ರೀತಿ ವರ್ಕೌಟ್ ಮಾಡಬೇಕು ಎಂಬುದನ್ನು ಗಮನಿಸಬೇಕು. ಜಿಮ್ ಗೆ ಹೋಗುವ ಮೊದಲು ಏನಾದರೂ ಅನುಮಾನಗಳಿದ್ದರೆ ನಿಮ್ಮ ಹೃದಯದ ಆರೋಗ್ಯ ತಪಾಸಣೆ ನಡೆಸಬಹುದು.

ವೈಟ್ ಲಿಫ್ಟರ್ ಗಳು 150 ಕೆ.ಜಿ., 200 ಕೆ.ಜಿ. ಭಾರ ಎತ್ತುವುದನ್ನು ನೋಡಿರಬಹುದು. ಇದೆಲ್ಲವೂ ಒಂದೇ ದಿನದಲ್ಲಿ ಆಗುವ ಕೆಲಸವಲ್ಲ. ಅವರು ಹಂತ ಹಂತವಾಗಿ ತರಬೇತಿ ಪಡೆದು ಆ ರೀತಿ ಭಾರ ಎತ್ತುತ್ತಾರೆ. ಹೀಗಾಗಿ ನಾವು ಜಿಮ್ ಮಾಡಲು ಆರಂಭಿಸಿದ ದಿನವೇ ಅತಿಯಾದ ಭಾರ ಎತ್ತುವುದು, ವರ್ಕೌಟ್ ಮಾಡುವುದು ಮಾಡಲು ಹೋದರೆ ಅದು ಹೃದಯದ ಮೇಲೆ ಪರಿಣಾಮ ಬೀರಬಹುದು. ಹಂತ ಹಂತವಾಗಿ ಸರಿಯಾದ ಸಲಹೆ ಪಡೆದುಕೊಂಡು ವರ್ಕೌಟ್ ಮಾಡಬೇಕು. ವರ್ಕೌಟ್ ಮಾಡುವುದು ಹೃದಯಕ್ಕೆ ಒಳ್ಳೆಯದು. ಆದರೆ ಅತಿಯಾಗಿ ಮತ್ತು ಒಮ್ಮೆಲೇ ಅತಿಯಾದ ವರ್ಕೌಟ್ ಮಾಡುವುದು ಹೃದಯಕ್ಕೆ ಭಾರವಾಗಬಹುದು ಎಂಬುದು ಡಾ ಸಿಎನ್ ಮಂಜುನಾಥ್ ಅವರ ಅಭಿಪ್ರಾಯವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಲಸ ಹುಡುಕಿ ನಗರಕ್ಕೆ ಬಂದಿದ್ದ ಯುವಕ ಅನುಮಾನಸ್ಪದ ಸಾವು

ಬೆಳಗಾವಿ: ಮನೆಯಿಂದ ಕೊಳೆತ ವಾಸನೆ, ಬಾಗಿಲು ತೆರೆದಾಗ ಮಾಜಿ ಪತಿ ಪೊಲೀಸಪ್ಪನ ಕೃತ್ಯ ಬಟಾಬಯಲು

ರಾಜ್ಯಸಭಾ ಸದಸ್ಯರ ಅಪಾರ್ಟ್‌ಮೆಂಟ್‌ನಲ್ಲಿ ಭಾರೀ ಬೆಂಕಿ ಅವಘಡ, ನಿವಾಸಿ ಹೇಳಿದ್ದೇನು

ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಹಾನಗಲ್ ತಹಶೀಲ್ದಾರ್ ಕಚೇರಿ ಶಿರಸ್ತೆದಾರ, ಮತ್ತಿಬ್ಬರ ಬಂಧನ

ಮೊದಲ ಬಾರಿ ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಪತ್ನಿ

ಮುಂದಿನ ಸುದ್ದಿ
Show comments