ಬೆಳ್ಳುಳ್ಳಿ ಹೀಗೆ ಉಪಯೋಗಿಸಿದರೆ ಮಾತ್ರ ಪ್ರಯೋಜನಕಾರಿ ಎನ್ನುತ್ತಾರೆ ಡಾ ಬಿಎಂ ಹೆಗ್ಡೆ

Krishnaveni K
ಶುಕ್ರವಾರ, 29 ಆಗಸ್ಟ್ 2025 (12:31 IST)
ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಉತ್ತಮ ಎಂದು ಅನೇಕ ಅಧ್ಯಯನಗಳು ಹೇಳುತ್ತವೆ. ಆದರೆ ಬೆಳ್ಳುಳ್ಳಿಯನ್ನು ಯಾವ ರೀತಿ ಸೇವನೆ ಮಾಡಿದರೆ ಪ್ರಯೋಜನಕಾರೀ ಎಂದು ಖ್ಯಾತ ವೈದ್ಯ ಡಾ ಬಿಎಂ ಹೆಗ್ಡೆ ಸಂವಾದವರೊಂದರಲ್ಲಿ ಹೀಗೆ ಹೇಳಿದ್ದರು.

ಬೆಳ್ಳುಳ್ಳಿಯಲ್ಲಿ ನಾನಾ ರೀತಿಯ ಪ್ರಯೋಜನಗಳಿವೆ. ಆರೋಗ್ಯದ ದೃಷ್ಟಿಯಿಂದ ಉತ್ತಮ. ಬೆಳ್ಳುಳ್ಳಿ ಖಾಯಿಲೆ ಗುಣಮಾಡಲು ಮಾತ್ರವಲ್ಲ, ಬಾರದಂತೆ ತಡೆಗಟ್ಟಲೂ ಉತ್ತಮ. ಕೆಲವು ಮಡಿವಂತರು ಬೆಳ್ಳುಳ್ಳಿ ತೆಗೆದುಕೊಳ್ಳುವುದಿಲ್ಲ.

ಆದರೆ ಬೆಳ್ಳುಳ್ಳಿಯ ವಿಚಾರವನ್ನು ನಮಗಿಂತ ಪಾಶ್ಚಾತ್ಯರು ಪ್ರಯೋಗ ಮಾಡಿ ಕಂಡುಕೊಂಡಿದ್ದಾರೆ. ಬೆಳ್ಳುಳ್ಳಿಯಲ್ಲಿ ಆಲನೀನ್ ಎನ್ನುವ ಔಷಧ ಗುಣವಿದೆ. ಬೆಳ್ಳುಳ್ಳಿಯನ್ನು ಹಾಗೇ ನುಂಗಿದರೆ, ಬೇಯಿಸಿದರೆ, ಕುದಿಸಿದರೆ ಪ್ರಯೋಜನವಿಲ್ಲ.

ಬೆಳ್ಳುಳ್ಳಿಯ ಪ್ರಯೋಜನವನ್ನು ನಿಜವಾಗಿ ಪಡೆಯಬೇಕೆಂದರೆ ಅದನ್ನು ಚೆನ್ನಾಗಿ ಜಗಿದು ತಿನ್ನಬೇಕು. ಅಗಿಯುವಾಗ ಜೊಲ್ಲು ರಸದೊಂದಿಗೆ ಸೇರಿಕೊಂಡು ಆಲನೀನ್ ಎನ್ನುವುದು ಆಲಸೀಸ್ ಆಗಿ ಬದಲಾಯಿಸುತ್ತದೆ. ಇದು ಆಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಇದು ನಿಮ್ಮ ದೇಹದಲ್ಲಿರುವ ಕೆಟ್ಟ ಕ್ರಿಮಿಗಳನ್ನು ಕೊಂದು ಹಾಕುತ್ತದೆ. ಬಾಯಿಯಲ್ಲಿ ಬೇಕಾದಷ್ಟು ನಮ್ಮ ಆರೋಗ್ಯಕ್ಕೆ ಬೇಕಾದ ಕ್ರಿಮಿಗಳಿವೆ. ಅವುಗಳನ್ನು ಉಳಿಸಿ ಬೇಡದ ಕ್ರಿಮಿಗಳನ್ನು ಬೆಳ್ಳುಳ್ಳಿ ಸಾಯಿಸುತ್ತದೆ. ಹೀಗಾಗಿ ಬೆಳ್ಳುಳ್ಳಿ ಪ್ರತಿನಿತ್ಯ ಸೇವನೆ ಮಾಡಿದರೆ ಜ್ವರ, ಶೀತ, ಶ್ವಾಸಕೋಶ ಸೋಂಕು ಇತ್ಯಾದಿ ರೋಗಗಳು ಬರುವುದಿಲ್ಲ ಎಂದು ಅವರು ಹೇಳಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು ಕ್ವಾರಿ ದುರಂತದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿ ಗಂಭೀರ ಆರೋಪ ಮಾಡಿದ ಆರ್ ಅಶೋಕ್

ಕೇತನ್ ಅಗರ್ವಾಲ್ ಕೇಸ್ ಬೆನ್ನಲ್ಲೇ ರಾಜ ರಘುವಂಶಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಇಷ್ಟೆಲ್ಲಾ ಮಾಡಿದ್ರೂ ಕೇತನ್ ಅಗರ್ವಾಲ್ ಹತ್ಯೆ ಮಾಡಿದ್ದಕ್ಕೆ ಸಿಯಾ ಗೋಯಲ್ ಗೆ ಶಿಕ್ಷೆಯಾಗೋದು ಅಷ್ಟು ಸುಲಭವಲ್ಲ

ದಬ್ಬಾಳಿಕೆ ಮಾಡುವುದನ್ನು ಬಿಟ್ಟು ರೈತರ ಜೊತೆ ಸಮಾಲೋಚನೆ ಮಾಡಿ: ಬಿ.ವೈ.ವಿಜಯೇಂದ್ರ

Video ಹೆತ್ತ ತಾಯಿಗೆ ಹೀಗೆ ಮಾಡೋದಾ.. ಹೆತ್ತ ಮಗನ ವರ್ತನೆಗೆ ಛೀಮಾರಿ ಹಾಕಿದ ಜನ

ಮುಂದಿನ ಸುದ್ದಿ
Show comments