ಶುಗರ್ ಲೆವೆಲ್ 200 ರ ಒಳಗಿದ್ದರೆ ಮಾತ್ರೆ ತೆಗೆದುಕೊಳ್ಳಬೇಕೇ: ಡಾ ಬಿಎಂ ಹೆಗ್ಡೆ ನೀಡಿದ್ದ ಸಲಹೆಯಿದು

Krishnaveni K
ಶನಿವಾರ, 23 ಆಗಸ್ಟ್ 2025 (11:18 IST)
ಬಹುತೇಕರಿಗೆ ಇಂದು ವಿವಿಧ ಕಾರಣಗಳಿಂದಾಗಿ ಮಧುಮೇಹದ ಖಾಯಿಲೆ ಬರುತ್ತಿದೆ. ಬಹುತೇಕರು ಸಣ್ಣ ಪ್ರಮಾಣದ ಶುಗರ್ ಲೆವೆಲ್ ನಿಂದ ಬಳಲುತ್ತಿರುತ್ತಾರೆ. ಶುಗರ್ ಲೆವೆಲ್ 200 ರೊಳಗಿದ್ದರೆ ನಿಗದಿತವಾಗಿ ಮಾತ್ರೆ ತೆಗೆದುಕೊಳ್ಳಲೇಬೇಕೇ? ಈ ಬಗ್ಗೆ ಸಂವಾದ ಕಾರ್ಯಕ್ರಮವೊಂದರಲ್ಲಿ ಖ್ಯಾತ ವೈದ್ಯ ಡಾ ಬಿಎಂ ಹೆಗ್ಡೆ ಒಮ್ಮೆ ಹೀಗೆ ಹೇಳಿದ್ದರು.

ಆಹಾರ ಶೈಲಿ, ಜೀವನ ಶೈಲಿ ಮತ್ತು ಅನುವಂಶಿಕ ಕಾರಣಗಳಿಂದಾಗಿ ಮಧುಮೇಹ ಬರುತ್ತದೆ. ಆದರೆ ಇಂದು ನಾವು ಕೆಲವೊಂದು ರೋಗಗಳಿಗೆ ತೆಗೆದುಕೊಳ್ಳುವ ಮಾತ್ರೆಗಳಿಂದಲೇ ನಮಗೆ ಮಧುಮೇಹ ಬರುತ್ತಿದೆ.

ಡಾ ಬಿಎಂ ಹೆಗ್ಡೆಯವರು ಒಮ್ಮೆ ಹೀಗೆ ಹೇಳಿದ್ದರು. ಡಯಾಬಿಟಿಸ್ ಎನ್ನುವುದು ಒಂದು ಹೊಸ ಖಾಯಿಲೆ ಅಲ್ಲ. ನಾವು ವೈದ್ಯರು ನೋಡುವ ಕೆಲವು ಮಾತ್ರೆಗಳಿಂದಲೇ ಡಯಾಬಿಟಿಸ್ ಬರುವ ಸಾಧ್ಯತೆಯಿದೆ. ಕೊಲೆಸ್ಟ್ರಾಲ್ ಅಂಶ ಕಡಿಮೆಗೊಳಿಸುವ ಒಂದು ಗುಳಿಗೆಯಿಂದಲೂ ನಿಮಗೆ ಮಧುಮೇಹ ಬರುವ ಸಾಧ್ಯತೆ ಶೇ.40 ರಷ್ಟಿರುತ್ತದೆ.

ಸಂವಾದ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಒಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಅವರು ಆಹಾರದ ನಂತರ ಶುಗರ್ ಲೆವೆಲ್ 190 ಇದ್ದರೆ ನಿಗದಿತವಾಗಿ ಮಾತ್ರೆ ತೆಗೆದುಕೊಳ್ಳಬೇಕೇ ಎಂಬ ಅನುಮಾನಕ್ಕೆ ಈ ರೀತಿ ಹೇಳಿದ್ದರು. 190 ಎನ್ನುವುದು ಗಂಭೀರವಲ್ಲ. 200 ರೊಳಗೆ ನಾರ್ಮಲ್ ಎಂದೇ ಅರ್ಥ. ಹೀಗಾಗಿ ನೀವು ಚಿಂತಿತರಾಗಬೇಕಿಲ್ಲ.  ನಿಮ್ಮ ಆಹಾರ ಶೈಲಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ, ವ್ಯಾಯಾಮ ಮಾಡಿ, ಒಳ್ಳೆಯ ಆಲೋಚನೆ ಮಾಡಿ, ಇತರರಿಗೆ ಸಹಾಯ ಮಾಡಿ, ಮಧುಮೇಹವನ್ನು ನೀವಾಗಿಯೇ ಜೀವನ ಶೈಲಿಯಿಂದಲೇ ನಿಯಂತ್ರಿಸಬಹುದು ಎಂದು ಅವರು ಹೇಳಿದ್ದರು.

ನೆನಪಿರಲಿ: ಈ ಸಲಹೆಗಳನ್ನು ಪಾಲಿಸುವ ಮುನ್ನ ನಿಮ್ಮ ತಜ್ಞ ವೈದ್ಯರ ಸಲಹೆ ಪಡೆಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೆಚ್ಚುತ್ತಿರುವ ಬಿಸಿಲ ಧಗೆ: ಉ.ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯದಲ್ಲೇ ಬದಲಾವಣೆ

ಪತ್ನಿ ಹತ್ಯೆ ಪ್ರಕರಣದಲ್ಲಿ 4 ವರ್ಷ ತಲೆಮರೆಸಿಕೊಂಡಿದಾತ LPG ಬುಕ್ಕಿಂಗ್ ಮಾಡಲು ಹೋಗಿ ಸಿಕ್ಕಿಬಿದ್ದ

ವರ್ಸ್ ಇನ್ನೋವೇಶನ್ ಆಡಳಿತ ಮಂಡಳಿಯ ನಿರ್ದೇಶಕರಾಗಿ ಪಿ ಆರ್ ರಮೇಶ್ ನೇಮಕ

ಕೈಕಾಲು ಸರಿ ಇದ್ದು ದುಡಿಯಕ್ಕಾಗಲ್ಲ ಎನ್ನುವವರು ಈ ವಿಡಿಯೋ ನೋಡಲೇಬೇಕು

ಭ್ರಷ್ಟ, ಮನೆಹಾಳ ಕಾಂಗ್ರೆಸ್ ತೊಲಗಿಸಲು ಬಿಜೆಪಿ ಬೆಂಬಲಿಸಿ: ಆರ್. ಆಶೋಕ್ ಮನವಿ

ಮುಂದಿನ ಸುದ್ದಿ
Show comments