ಬೆಂಗಳೂರಿನಲ್ಲಿ ವಿಪರೀತ ಶೈತ್ಯ ಹವೆ: ಮಕ್ಕಳ ಆರೋಗ್ಯದ ಬಗ್ಗೆ ಈ ಎಚ್ಚರಿಕೆ ವಹಿಸಿ

Krishnaveni K
ಗುರುವಾರ, 28 ನವೆಂಬರ್ 2024 (10:11 IST)
Photo Credit: X
ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ವಿಪರೀತ ಮಳೆಯಿಂದಾಗಿ ಒದ್ದೆಯಾಗಿದ್ದ ಬೆಂಗಳೂರಿನಲ್ಲಿ ಈಗ ಕಳೆದ ಒಂದು ವಾರದಿಂದ ವಿಪರೀತ ಚಳಿಯ ವಾತಾವರಣವಿದೆ. ಇದರಿಂದಾಗಿ ಶೀತ, ವೈರಲ್ ಜ್ವರದ ಪ್ರಮಾಣ ಹೆಚ್ಚುತ್ತಿದೆ.

ರಾಜ್ಯ ರಾಜಧಾನಿಯಲ್ಲಿ ಇಡೀ ದಿನ ವಿಪರೀತ ಚಳಿ, ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಇದರಿಂದಾಗಿ ಶೀತ, ಗಂಟಲು ನೋವು, ಕಫ, ತಲೆನೋವು, ವೈರಲ್ ಜ್ವರದ ಪ್ರಕರಣಗಳು ಹೆಚ್ಚಾಗಿವೆ. ವಿಶೇಷವಾಗಿ ಶಾಲೆಗೆ ಹೋಗುವ ಮಕ್ಕಳಲ್ಲಿ ಈ ರೀತಿಯ ರೋಗಗಳು ಹೆಚ್ಚುತ್ತಿವೆ.

ಹೀಗಾಗಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ತಜ್ಞರೂ ಹೇಳುತ್ತಿದ್ದಾರೆ. ಶಾಲೆಗೆ ಹೋಗುವ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಕೆಲವೊಂದು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದು ಉತ್ತಮ.
 
  • ಜ್ವರ, ಶೀತದ ಲಕ್ಷಣವಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಲೇಬೇಡಿ
  • ಮಕ್ಕಳಿಗೆ ಶಾಲೆಗೂ ಬಿಸಿ ನೀರನ್ನೇ ಸೇವನೆ ಮಾಡಲು ಕೊಡಿ
  • ಮನೆಯಲ್ಲಿ ರಾತ್ರಿ ಮಲಗುವ ಮುನ್ನ ಬಿಸಿ ನೀರಿನ ಗಾರ್ಗಲ್ ಮಾಡಲು ಹೇಳಿ
  • ಶಾಲೆಗೆ ಹೋಗುವಾಗ ತಪ್ಪದೇ ಮಾಸ್ಕ್ ಧರಿಸಿ ಹೋಗಿ
  • ಆದಷ್ಟು ಹೊರಾವರಣದಲ್ಲಿ ಆಡುವಾಗ ಧೂಳು, ನೀರಿನಲ್ಲಿ ಆಡಲು ಬಿಡಬೇಡಿ
  • ಮಕ್ಕಳಿಗೆ ದೇಹ ಬೆಚ್ಚಗಾಗಿಸಲು ಸೂಪ್, ಕಷಾಯದಂತಹ ಪಾನೀಯಗಳನ್ನು ನೀಡಿ
  • ಜಿಡ್ಡು, ಕರಿದ ಆಹಾರಗಳನ್ನು ಸೇವಿಸಿದರೆ ಜೀರ್ಣ ಸಮಸ್ಯೆಯಾಗಬಹುದು
  • ಆದಷ್ಟು ಪೌಷ್ಠಿಕಾಂಶವಿರುವ ಹಣ್ಣು, ತರಕಾರಿಗಳನ್ನು ಸೇವಿಸಲು ಕೊಡಿ
  • ಎಲ್ಲಕ್ಕಿಂತ ಮುಖ್ಯವಾಗಿ ಚಳಿಗಾಲದಲ್ಲಿ ಹೆಚ್ಚು ನೀರು ಸೇವನೆ ಮಾಡುವುದು ಮುಖ್ಯ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಹಿಳೆಯರಿಗೆ ಉಚಿತ ಬಸ್ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಿದ ಸರ್ಕಾರ

ಬಿಕ್ಲು ಶಿವು ಮರ್ಡರ್ ಕೇಸ್ ನಲ್ಲಿ ಅರೆಸ್ಟ್ ಆಗಿರುವ ಶಾಸಕ ಬೈರತಿ ಬಸವರಾಜುಗೆ ಪೊಲೀಸ್ ಠಾಣೆಯಲ್ಲೇ ಆತಿಥ್ಯ

ಲೋಕಸಭೆಯಲ್ಲಿ ತಮ್ಮದೇ ಲೋಕದಲ್ಲಿದ್ದ ಈ ಇಬ್ಬರು ಸಂಸದರು ಈಗ ಫುಲ್ ಟ್ರೋಲ್ Video

Karnataka Weather: ಅವಧಿಗೆ ಮುನ್ನ ಬೇಸಿಗೆ ಆರಂಭ, ಇಂದಿನಿಂದ ಹವಾಮಾನದಲ್ಲಿ ಮಹತ್ವದ ಬದಲಾವಣೆ

ನಿರ್ಮಲಾ ಸೀತರಾಮನ್‌ ಉತ್ತಮ ಕಥೆಗಾರ್ತಿ: ಜಯಾ ಬಚ್ಚನ್ ಟೀಕೆ

ಮುಂದಿನ ಸುದ್ದಿ
Show comments