Select Your Language

Notifications

webdunia
webdunia
webdunia
webdunia

‘ಜನ ಹೇಳುವ ಆಟಗಾರರನ್ನು ಟೀಂ ಇಂಡಿಯಾಕ್ಕೆ ಸೆಲೆಕ್ಟ್ ಮಾಡಕ್ಕಾಗುತ್ತಾ?’

‘ಜನ ಹೇಳುವ ಆಟಗಾರರನ್ನು ಟೀಂ ಇಂಡಿಯಾಕ್ಕೆ ಸೆಲೆಕ್ಟ್ ಮಾಡಕ್ಕಾಗುತ್ತಾ?’
Mumbai , ಬುಧವಾರ, 10 ಮೇ 2017 (08:20 IST)
ಮುಂಬೈ: ಮುಂಬರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ತಂಡದ ಆಯ್ಕೆಯಲ್ಲಿ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಗಂಭೀರ್ ಮುಂತಾದ ಆಟಗಾರರನ್ನು ಕಡೆಗಣಿಸಿರುವುದಕ್ಕೆ ಆಯ್ಕೆ ಸಮಿತಿ ಟೀಕೆಗೊಳಗಾಗಿದೆ.

 
ಆದರೆ ಜನ ಹೇಳಿದ ಆಟಗಾರರನ್ನು ನಾವು ಆಯ್ಕೆ ಮಾಡಲಾಗದು. ಸಾರ್ವಜನಿಕರ ಅಭಿಪ್ರಾಯ ಮತ್ತು ಐಪಿಎಲ್ ಪ್ರದರ್ಶನಗಳು ಟೀಂ ಇಂಡಿಯಾಕ್ಕೆ ಆಯ್ಕೆಯಾಗಲು ಮಾನದಂಡವಲ್ಲ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಹೇಳಿದ್ದಾರೆ.

ಗೌತಮ್ ಗಂಭೀರ್, ರಿಷಬ್ ಪಂತ್ ರಂತಹ ಆಟಗಾರರು ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ ಆಯ್ಕೆಯಾಗಿಲ್ಲ. ಅವರ ಬದಲಿಗೆ ಮನೀಶ್ ಪಾಂಡೆ, ಶಿಖರ್ ಧವನ್ ರಂತಹ ಆಟಗಾರರನ್ನು ಆಯ್ಕೆ ಮಾಡಿದ್ದಕ್ಕೆ ಅಭಿಮಾನಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐವತ್ತು ಓವರ್ ಗಳ ಪಂದ್ಯದಲ್ಲಿ ಆಡಬೇಕಾದರೆ ಫಿಟ್ ಆದ ಆಲ್ ರೌಂಡರ್ ಗಳು ಬೇಕು. ಅಂತಹ ಆಟಗಾರರನ್ನು ಗಮನದಲ್ಲಿಟ್ಟುಕೊಂಡು ತಂಡ ಆಯ್ಕೆ ಮಾಡಿದ್ದೇವೆ ಎಂದು ಆಯ್ಕೆ ಸಮಿತಿ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಪಂಜಾಬ್ ಕನಸು ಜೀವಂತವಾಗಿರಿಸಿದ ಬೌಲರ್ ಗಳು