Select Your Language

Notifications

webdunia
webdunia
webdunia
webdunia

ಧೋನಿ ಪುತ್ರಿ ಜೀವಾ ಕೇಳಿದ ಈ ಪ್ರಶ್ನೆಗೆ ಅಮ್ಮ ಸಾಕ್ಷಿ ತಬ್ಬಿಬ್ಬು!

ಧೋನಿ ಪುತ್ರಿ ಜೀವಾ ಕೇಳಿದ ಈ ಪ್ರಶ್ನೆಗೆ ಅಮ್ಮ ಸಾಕ್ಷಿ ತಬ್ಬಿಬ್ಬು!
ರಾಂಚಿ , ಶುಕ್ರವಾರ, 20 ಮಾರ್ಚ್ 2020 (09:07 IST)
ರಾಂಚಿ: ಧೋನಿ ಪುತ್ರಿ ಜೀವಾ ಆಗಾಗ ತನ್ನ ಮುದ್ದು ಮುದ್ದಾದ ವಿಡಿಯೋಗಳಿಂದ ಫೇಮಸ್ ಆಗಿಬಿಟ್ಟಿದ್ದಾಳೆ. ಆದರೆ ಜೀವಾ ಇದೀಗ ಕೇಳಿರುವ ಗಂಭೀರ ಪ್ರಶ್ನೆಗೆ ಅಮ್ಮ ಸಾಕ್ಷಿ ತಬ್ಬಿಬ್ಬಾಗಿದ್ದಾರೆ! ಅಷ್ಟಕ್ಕೂ ಜೀವಾ ಏನು ಪ್ರಶ್ನೆ ಕೇಳಿದಳು ಗೊತ್ತಾ?


ಜೀವಾ ಧೋನಿ ಕೇಳಿದ ಪ್ರಶ್ನೆಯನ್ನು ಸಾಕ್ಷಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ. ‘ಕೆಲವು ಮಾರಕ ಸೋಂಕುಗಳು ಕೇವಲ ಮನುಷ್ಯರಿಗೆ ಮಾತ್ರ ಯಾಕೆ ಬರುತ್ತವೆ? ಪ್ರಾಣಿಗಳಿಗೆ ಯಾಕೆ ಬರಲ್ಲ?’ ಹೀಗೊಂದು ಪ್ರಶ್ನೆಯನ್ನು ಜೀವಾ ಕೇಳಿದ್ದಾಳೆ.

ಇದಕ್ಕೆ ಸಾಕ್ಷಿ ‘ನಮ್ಮ ಭೂಮಿ ದೇವಿ ಮನುಷ್ಯರು ಮಾಡುವ ಕೆಲಸದಿಂದ ಬೇಸರಗೊಂಡಿದ್ದಾಳೆ. ಅದಕ್ಕೇ ಮನುಷ್ಯರಿಗೆ ಇಂತಹ ಖಾಯಿಲೆ ಬರುತ್ತಿದೆ’ ಎಂದು ಸಮಾಧಾನಿಸಿದ್ದಾರೆ. ಅಷ್ಟೇ ಅಲ್ಲದೆ, ಭೂಮಿ ದೇವಿಗೆ ಖುಷಿಯಾಗುವ ಹಾಗೆ ನಾವು ಏನು ಮಾಡಬೇಕು ಎಂದು ಜೀವಾ ಕೇಳಿದ್ದು, ಇದಕ್ಕೆ ಸಾಕ್ಷಿ ನಮ್ಮ ಸುತ್ತಮುತ್ತಲ ಪರಿಸರ ಶುಚಿಯಾಗಿಟ್ಟುಕೊಳ್ಳಬೇಕು, ನೀರು, ಆಹಾರ ಪೋಲು ಮಾಡಬಾರದು ಎಂದೆಲ್ಲಾ ತಿಳಿಸಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಲಿಂಪಿಕ್ ನಡೆಸಲು ಕೊರೋನಾವೈರಸ್ ಮುಚ್ಚಿಡುತ್ತಿದೆಯಾ ಜಪಾನ್?