Webdunia - Bharat's app for daily news and videos

Install App

ವಿಶ್ವಕಪ್ 2019: ರೋಹಿತ್ ಶರ್ಮಾ ಒಂದರ ಹಿಂದೊಂದು ಶತಕ ಗಳಿಸುತ್ತಿರುವುದರ ಗುಟ್ಟೇನು ಗೊತ್ತಾ?

Webdunia
ಸೋಮವಾರ, 8 ಜುಲೈ 2019 (09:12 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಾಗುತ್ತಿದೆ. ರೋಹಿತ್ ಒಂದಾದ ಮೇಲೊಂದರಂತೆ ನೀರು ಕುಡಿದಷ್ಟೇ ಸಲೀಸಾಗಿ ಶತಕ ಗಳಿಸುತ್ತಿದ್ದಾರೆ.


ಅಷ್ಟಕ್ಕೂ ರೋಹಿತ್ ಈ ಯಶಸ್ಸಿನ ಹಿಂದಿನ ಗುಟ್ಟೇನು ಗೊತ್ತಾ? ಇದನ್ನು ಅವರೇ ಸ್ವತಃ ಬಹಿರಂಗಪಡಿಸಿದ್ದಾರೆ. ಈ ರೀತಿ ತಾನು ಯಶಸ್ಸಿನ ಹಾದಿ ಹಿಡಿಯುವುದಕ್ಕೆ ಯುವರಾಜ್ ಸಿಂಗ್ ಸಲಹೆಯೇ ಕಾರಣ ಎಂದು ರೋಹಿತ್ ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದ ಯುವರಾಜ್ ಐಪಿಎಲ್ ನಲ್ಲಿ ರೋಹಿತ್ ಜತೆಗೆ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಈ ವೇಳೆ ಯುವಿ ಬಳಿ ರೋಹಿತ್ ತಮಗೆ ನಿರೀಕ್ಷಿಸಿದಷ್ಟು ರನ್ ಪೇರಿಸಲು ಸಾಧ್ಯವಾಗುತ್ತಿಲ್ಲ ಯಾಕೆ ಎಂದು ಚರ್ಚಿಸಿದ್ದರಂತೆ.

ಅದಕ್ಕೆ ಯುವರಾಜ್ ತಲೆಕೆಡಿಸಿಕೊಳ್ಳಬೇಡ. ನಾನೂ 2011 ರ ವಿಶ್ವಕಪ್ ಗೆ ಮೊದಲು ಹೀಗೇ ಯೋಚಿಸುತ್ತಿದ್ದೆ. ಆದರೆ ಸಕಾರಾತ್ಮಕವಾಗಿ ಯೋಚನೆ ಮಾಡಲು ಶುರು ಮಾಡಿದೆ. ಹಾಗೇ ವಿಶ್ವಕಪ್ ನಲ್ಲಿ ಕ್ಲಿಕ್ ಆದೆ. ನೀನೂ ಹೀಗೆಯೇ. ಬಹುಶಃ ದೊಡ್ಡ ವೇದಿಕೆಯಲ್ಲಿ ನೀನು ನೀನಾಗಿಯೇ ಉತ್ತಮ ಪರ್ಫಾರ್ಮೆನ್ಸ್ ಕೊಡಲು ಶುರು ಮಾಡುವೆ. ತಲೆಕೆಡಿಸಿಕೊಳ್ಳಬೇಡ ಎಂದಿದ್ದರು. ಬಹುಶಃ ಯುವಿ ಅಂದು ನನಗೆ ಹೇಳಿದ ಆ ದೊಡ್ಡ ವೇದಿಕೆ ಇದುವೇ ಆಗಿರಬೇಕು ಎಂದು ರೋಹಿತ್ ನೆನೆಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಡಬ್ಲ್ಯುಟಿಸಿ ಫೈನಲ್ ಗೆಲ್ಲಲು ದ ಆಫ್ರಿಕಾಗೆ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ

Gautam Gambhir: ಗೌತಮ್ ಗಂಭೀರ್ ತಾಯಿಗೆ ಗಂಭೀರ: ಭಾರತಕ್ಕೆ ಮರಳಿದ ಟೀಂ ಇಂಡಿಯಾ ಕೋಚ್

Shubman Gill: ಸಚಿನ್, ಕೊಹ್ಲಿಗೇ ಇಲ್ಲದ ಅಹಂ ಶುಬ್ಮನ್ ಗಿಲ್ ತಲೆಗೆ ಹತ್ತಿದ್ಯಾ: ನೆಟ್ಟಿಗರ ಆಕ್ರೋಶ

ಜೂನ್ 14 ಆರ್ ಸಿಬಿ ಪಾಲಿಗೆ ಮಹತ್ವದ ದಿನ: ಅಭಿಮಾನಿಗಳ ಆತಂಕ ನಿಜ ಮಾಡುತ್ತಾ ಬಿಸಿಸಿಐ

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

ಮುಂದಿನ ಸುದ್ದಿ
Show comments