ಟೀಂ ಇಂಡಿಯಾ ಕೋಚ್ ಹುದ್ದೆ ನಿರಾಕರಿಸಿದ್ದ ರಾಹುಲ್ ದ್ರಾವಿಡ್: ಕಾರಣವೇನು ಗೊತ್ತಾ?

Webdunia
ಸೋಮವಾರ, 6 ಜುಲೈ 2020 (11:40 IST)
ಮುಂಬೈ: ಎಲ್ಲಾ ಸರಿ ಹೋಗಿದ್ದರೆ ಅನಿಲ್ ಕುಂಬ್ಳೆ ಬಳಿಕ ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್ ಆಗಬೇಕಿತ್ತು. ಆದರೆ ಈ ಅವಕಾಶವನ್ನು ಅವರಾಗಿಯೇ ನಿರಾಕರಿಸಿದರು ಎಂದು ಬಿಸಿಸಿಐ ಮಾಜಿ ಸಿಇಒ ವಿನೋದ್ ರಾಯ್ ಹೇಳಿದ್ದಾರೆ.


2017 ರಲ್ಲಿ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ ಬಳಿಕ ರಾಹುಲ್ ಹೆಸರು ಚಾಲ್ತಿಯಲ್ಲಿತ್ತು. ಅವರಿಗೆ ಕೋಚ್ ಹುದ್ದೆ ನೀಡಲು ತಯಾರಿದ್ದೆವು. ಆದರೆ ದ್ರಾವಿಡ್ ನಿರಾಕರಿಸಿದರು ಎಂದು ವಿನೋದ್ ರಾಯ್ ಹೇಳಿದ್ದಾರೆ. ಇದಕ್ಕೆ ದ್ರಾವಿಡ್ ನೀಡಿದ್ದ ಕಾರಣವೇನು ಗೊತ್ತಾ?

‘ನನಗೆ ಮನೆಯಲ್ಲಿ ಇಬ್ಬರು ಬೆಳೆಯುತ್ತಿರುವ ಮಕ್ಕಳಿದ್ದಾರೆ. ಸದ್ಯಕ್ಕೆ ಟೀಂ ಇಂಡಿಯಾ ಜತೆಗೆ ಮನೆ, ಕುಟುಂಬ ಬಿಟ್ಟು ತುಂಬಾ ಸಮಯ ಪ್ರವಾಸ ಮಾಡುತ್ತಿರಲು ಕಷ್ಟವಾಗುತ್ತದೆ. ಇದರಿಂದ ನನಗೆ ಟೀಂ ಇಂಡಿಯಾ ಕಡೆಗೆ ಸಂಪೂರ್ಣ ಗಮನ ಕೊಡಲು ಸಾಧ‍್ಯವಾಗಲ್ಲ’ ಎಂದಿದ್ದರಂತೆ ದ್ರಾವಿಡ್. ಅಷ್ಟೇ ಅಲ್ಲ ಆಗ ದ್ರಾವಿಡ್ ಅಂಡರ್ 19 ಕೋಚ್ ಆಗಿದ್ದರು. ಹುಡುಗರನ್ನು ಭವಿಷ್ಯದ ತಂಡಕ್ಕೆ ತಯಾರು ಮಾಡಲು ಅವರದ್ದೇ ಯೋಜನೆ ಹಾಕಿಕೊಂಡಿದ್ದರಂತೆ. ಇದರಲ್ಲೇ ನನಗೆ ಖುಷಿಯಿದೆ ಎಂದು ದ್ರಾವಿಡ್ ಟೀಂ ಇಂಡಿಯಾ ಕೋಚ್‍ ಆಗುವ ಅವಕಾಶವನ್ನು ನಿರಾಕರಿಸಿದರು ಎಂದು ವಿನೋದ್ ರಾಯ್ ಬಹಿರಂಗಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮತ್ತೇ ಒಂದಾಗುತ್ತಾರಾ ಪಲಾಶ್‌, ಸ್ಮೃತಿ ಮಂಧಾನ, ಕುತೂಹಲ ಮೂಡಿಸಿದ ಮಂದಾನ, ಪಲಾಶ್‌ ನಡೆ

ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಏಕದಿನ ನಾಳೆ ಶುರು: ರೋ ಕೊ ಜೋಡಿ ಮೇಲೆ ಕಣ್ಣು

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜೊತೆ ಬಿಸಿಸಿಐ ಮೀಟಿಂಗ್: ಗಂಭೀರ್, ಅಗರ್ಕರ್ ಜೊತೆ ಮಾಡಿ ಎಂದ ಫ್ಯಾನ್ಸ್

WPL 2026 ವೇಳಾಪಟ್ಟಿ ಪ್ರಕಟ: ಆರ್ ಸಿಬಿ ಮ್ಯಾಚ್ ವೇಳಾಪಟ್ಟಿ ಇಲ್ಲಿದೆ

ಸ್ಮೃತಿ ಮಂಧಾನ, ಪಾಲಾಶ್ ಮದುವೆ ನಡೆಯುತ್ತಾ: ಬಿಗ್ ಅಪ್ ಡೇಟ್ ಕೊಟ್ಟ ಪಾಲಾಶ್ ತಾಯಿ

ಮುಂದಿನ ಸುದ್ದಿ
Show comments