Webdunia - Bharat's app for daily news and videos

Install App

ಟ್ವೀಟ್ ಮಾಡಿ ಸಂಕಷ್ಟಕ್ಕೀಡಾದ ವೀರೇಂದ್ರ ಸೆಹ್ವಾಗ್

Webdunia
ಸೋಮವಾರ, 5 ಫೆಬ್ರವರಿ 2018 (11:53 IST)
ನವದೆಹಲಿ: ಟೀಂ ಇಂಡಿಯಾ ದ.ಆಫ್ರಿಕಾ ನಡುವಿನ ಏಕದಿನ ಪಂದ್ಯದಲ್ಲಿ ಅಂಪಾಯರ್ ಗಳು ಗೆಲುವಿಗೆ ಎರಡು ರನ್ ಬಾಕಿಯಿದ್ದಾಗ ಲಂಚ್ ಬ್ರೇಕ್ ನೀಡಿದ್ದನ್ನು ತಮಾಷೆ ಮಾಡುವ ಟ್ವೀಟ್ ಮಾಡುವಾಗ ಕ್ರಿಕೆಟಿಗ ಸೆಹ್ವಾಗ್ ಎಡವಟ್ಟು ಮಾಡಿಕೊಂಡಿದ್ದಾರೆ.
 

ಸೆಹ್ವಾಗ್ ಟ್ವೀಟ್ ನಲ್ಲಿ ಅಂಪಾಯರ್ ಗಳು ಬ್ಯಾಂಕ್ ನೌಕರರ ಹಾಗೆ ಬ್ಯಾಟ್ಸ್ ಮನ್ ಗಳಿಗೆ ಬಾಕಿ ರನ್ ಮಾಡಲು ಊಟದ ನಂತರ ಬನ್ನಿ ಎಂದು ಪೆವಿಲಿಯನ್ ಗೆ ಕಳುಹಿಸಿದರು ಎಂದು ತಮಾಷೆ ಮಾಡಿದ್ದರು.

ಈ ಟ್ವೀಟ್ ಗೆ ಕೆಲವು ಬ್ಯಾಂಕ್ ನೌಕರರು ಟ್ವಿಟರ್ ನಲ್ಲೇ ಸೆಹ್ವಾಗ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವೂ ಬ್ಯಾಂಕ್ ನೌಕರರೇ. ಆದರೆ ಗ್ರಾಹಕರಿಗೆ ಲಂಚ್ ಮುಗಿದ ಮೇಲೆ ಬನ್ನಿ ಎನ್ನಲ್ಲ ಎಂದಿದ್ದಾರೆ.

ಇದೀಗ ಈ ಪ್ರತಿಕ್ರಿಯೆಗಳಿಗೆ ಸಮಜಾಯಿಷಿ ನೀಡಿರುವ ವೀರೂ, ಬ್ಯಾಂಕ್ ಗಳ ಸಮಸ್ಯೆಯನ್ನು ತೆರೆದಿಟ್ಟಿದ್ದಾರೆ. ಬಹುಶಃ ನೀವು ಈ ರೀತಿ ಮಾಡುವವರಲ್ಲ. ಆದರೆ ಹೆಚ್ಚಿನ ಬ್ಯಾಂಕ್ ಗಳಲ್ಲಿ ಇದೇ ಸಮಸ್ಯೆ. ಕೆಲಸ ಮಾಡಲು ಹೋದರೆ ಸರ್ವರ್ ಡೌನ್, ಊಟದ ಸಮಯ, ಪ್ರಿಂಟರ್ ಸರಿ ಇಲ್ಲ ಎಂದೆಲ್ಲಾ ನೆಪ ಹೇಳಿ ಅಲೆದಾಡಿಸುತ್ತಾರೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SL: ಟೀಂ ಇಂಡಿಯಾಗೆ ಲಂಕಾ ಎದುರು ಭರ್ಜರಿ ಜಯ: ಕನ್ನಡಿಗೆ ಸಿಕ್ತು ಬಂಪರ್

IND vs SL:ಥ್ಯಾಂಕ್ಸ್ ಮಗಾ… ಬಚಾವ್ ಮಾಡಿದ ಗೆಳೆಯ ದೇವದತ್ ಪಡಿಕ್ಕಲ್ ಗೆ ಮೈದಾನದಲ್ಲೇ ತಬ್ಬಿ ಕಿಸ್ ಕೊಟ್ಟ ಕೆಎಲ್ ರಾಹುಲ್ Video

IND vs SL: ಕ್ಯಾಪ್ಟನ್ ಅಂದ್ರೆ ಹೀಗಿರಬೇಕು… ಶುಭಮನ್ ಗಿಲ್ ಪಡೆದ ಈ ಅದ್ಭುತ ಕ್ಯಾಚ್ ನೋಡಿ ಕಣ್ತುಂಬಿಕೊಳ್ಳಬೇಕು

ಭಾರತ ತಂಡದ 600ನೇ ಚಾರಿತ್ರಿಕ ಪಂದ್ಯಕ್ಕೆ ವರುಣನ ಅವಕೃಪೆ: ಉತ್ತಮ ಸ್ಥಿತಿಯಲ್ಲಿ ಟೀಂ ಇಂಡಿಯಾ

ಲಂಕಾ ವಿರುದ್ಧದ ಟೆಸ್ಟ್‌ಗೂ ಮುನ್ನಾ ಶ್ರೀಲಂಕಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಟೀಂ ಇಂಡಿಯಾ, Video

ಮುಂದಿನ ಸುದ್ದಿ
Show comments