ರೋಹಿತ್ ಶರ್ಮಾಗೂ ಹೀಗೇ ಆಗಿರಬೇಕು! ಗಾಯದ ಮರ್ಮ ಬಿಡಿಸಿಟ್ಟ ಸೆಹ್ವಾಗ್

Webdunia
ಶನಿವಾರ, 7 ನವೆಂಬರ್ 2020 (09:00 IST)
ದುಬೈ: ಫಿಸಿಯೋಗಳು ಗಾಯದ ಕಾರಣ ನೀಡಿ ಟೀಂ ಇಂಡಿಯಾದಿಂದ ಹೊರಗಿಟ್ಟಿರುವಾಗ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡುತ್ತಿರುವುದು ಹೇಗೆ? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದರ ಬಗ್ಗೆ ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮದೇ ಉದಾಹರಣೆ ಸಮೇತ ಸಮರ್ಥನೆ ನೀಡಿದ್ದಾರೆ.

 
2011 ರ ವಿಶ್ವಕಪ್ ಗೆ ಮೊದಲು ನನಗೆ ಭುಜದ ಗಾಯವಾಗಿತ್ತು. ವೈದ್ಯರು ಸರ್ಜರಿ ಅಗತ್ಯ ಎಂದಿದ್ದರು. ನಾನು ಡಿಸೆಂಬರ್ ನಲ್ಲಿ ಸರ್ಜರಿಗೊಳಗಾಗಬೇಕಿತ್ತು. ಇದನ್ನು ನಾನು ಕೋಚ್ ಕರ್ಸ್ಟನ್ ಮತ್ತು ಬಿಸಿಸಿಐಗೆ ತಿಳಿಸಿದ್ದೆ. ಆದರೆ ಆಗ ನಾನು ಸರ್ಜರಿಗೊಳಗಾಗಿದ್ದರೆ ವಿಶ್ವಕಪ್ ಗೆ ಆಯ್ಕೆಯಾಗಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಬಿಸಿಸಿಐ ವಿಶ್ವಕಪ್ ಬಳಿಕ ಸರ್ಜರಿಗೊಳಗಾಗಿ ಎಂದು ಸಲಹೆ ನೀಡಿತ್ತು. ಹಾಗಾಗಿ ನಾನು ಕೇವಲ ಟೆಸ್ಟ್ ಕ್ರಿಕೆಟ್ ಆಡಿ, ಭುಜಕ್ಕೆ ಇಂಜಕ್ಷನ್ ಪಡೆಯುತ್ತಾ ವಿಶ್ವಕಪ್ ಆಡಿ ಮುಗಿಸಿದ್ದೆ. ಬಹುಶಃ ರೋಹಿತ್ ಶರ್ಮಾ ಪ್ರಕರಣದಲ್ಲೂ ಹೀಗೇ ಆಗಿರಬೇಕು. ಐಪಿಎಲ್ ಫೈನಲ್ ಮತ್ತು ಆಸ್ಟ್ರೇಲಿಯಾ ಸರಣಿ ಮಹತ್ವದ್ದಾಗಿದ್ದರಿಂದ ಅವರನ್ನು ಈಗ ಆಡಿಸಲಿ. ಅಗತ್ಯ ಬಂದರೆ ಬದಲಿ ಆಟಗಾರನನ್ನೂ ಕರೆದುಕೊಂಡು ಹೋಗಲಿ. ಒಂದು ವೇಳೆ ಅವರು ಆಡುವಷ್ಟು ಫಿಟ್ ಆಗಿದ್ದರೆ ಮಹತ್ವದ ಸರಣಿಯಿಂದ ಅವರನ್ನು ಟೀಂ ಇಂಡಿಯಾದಿಂದ ಹೊರಗಿಡುವ ಔಚಿತ್ಯವೇನು ಎಂದು ಸೆಹ್ವಾಗ್ ಪ್ರಶ್ನಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೊಹಮ್ಮದ್ ಶಮಿಗೆ ಸುಪ್ರೀಂ ನೋಟಿಸ್: ವೃತ್ತಿ ಜೀವನದ ಬಳಿಕ ವೈಯಕ್ತಿಕ ಜೀವನದಲ್ಲೂ ಸಂಕಷ್ಟ

ಏನಾದ್ರೂ ಆಗಲಿ ಅಹಮ್ಮದಾಬಾದ್ ನಲ್ಲಿ ಮಾತ್ರ ಟಿ20 ವಿಶ್ವಕಪ್ ಫೈನಲ್ ಬೇಡ ಅಂತಿದ್ದಾರೆ ಫ್ಯಾನ್ಸ್

Betting Case: ಸುರೇಶ್ ರೈನಾ, ಶಿಖರ್ ಧವನ್ ಮುಟ್ಟುಗೋಲಾದ ಆಸ್ತಿಯೆಷ್ಟು ಗೊತ್ತಾ

ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ಟೀಂ ಇಂಡಿಯಾಗೆ ಸರಣಿ ಮುನ್ನಡೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ ಗಿಫ್ಟ್ ಕೊಟ್ಟ ಮಹಿಳಾ ಕ್ರಿಕೆಟಿಗರು video

ಮುಂದಿನ ಸುದ್ದಿ
Show comments