Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ನನ್ನ ಅಪ್ಪನನ್ನು ಕೊಲ್ಲಲಿಲ್ಲ ಎಂದ ಹುಡುಗಿಗೆ ವೀರೇಂದ್ರ ಸೆಹ್ವಾಗ್ ಎದಿರೇಟು

ಪಾಕಿಸ್ತಾನ ನನ್ನ ಅಪ್ಪನನ್ನು ಕೊಲ್ಲಲಿಲ್ಲ ಎಂದ ಹುಡುಗಿಗೆ ವೀರೇಂದ್ರ ಸೆಹ್ವಾಗ್ ಎದಿರೇಟು
NewDelhi , ಸೋಮವಾರ, 27 ಫೆಬ್ರವರಿ 2017 (14:10 IST)
ನವದೆಹಲಿ: ಪಾಕಿಸ್ತಾನ ನನ್ನ ಅಪ್ಪನ ಸಾವಿಗೆ ಕಾರಣವಲ್ಲ. ಯುದ್ಧದಿಂದಾಗಿ ನನ್ನಪ್ಪ ತೀರಿಕೊಂಡರು ಎಂಬ ಬರಹವುಳ್ಳ ಫಲಕದ ಜತೆ ಫೋಟೋ ಪ್ರಕಟಿಸಿ ವಿವಾದಕ್ಕೀಡಾದ ಹುತಾತ್ಮ ಯೋಧನ ಪುತ್ರಿಗೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಿರುಗೇಟು ನೀಡಿದ್ದಾರೆ.


ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿರುವ ಸೆಹ್ವಾಗ್ “ನಾನು ಎರಡು ತ್ರಿಶತಕಗಳನ್ನು ಗಳಿಸಿರಲಿಲ್ಲ. ನನ್ನ ಬ್ಯಾಟ್ ತ್ರಿಶತಕ ಗಳಿಸಿತು” ಎಂದು ಬರಹವುಳ್ಳ ಬಿತ್ತಿ ಪತ್ರ ಹಿಡಿದ ಫೋಟೋ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ. ಇದೀಗ ಟ್ವಿಟರ್ ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಹುತಾತ್ಮ ಯೋಧನ ಪುತ್ರಿ ದೆಹಲಿ ವಿವಿಯ ರಾಮ್ ಜಾಸ್ ಕಾಲೇಜಿನ ವಿದ್ಯಾರ್ಥಿನಿ. ಆಕೆಗೆ ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದೆ ಎಂದು ಆಕೆ ಆರೋಪಿಸಿದ್ದಳು. ಇದಕ್ಕೆ ವಿರುದ್ಧ ಆಕೆ ಈ ರೀತಿ ಪ್ರತಿಭಟನೆಗೆ ಇಳಿದಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

‘ಟೀಂ ಇಂಡಿಯಾ ಈ ಇಬ್ಬರು ಆಟಗಾರರನ್ನು ಕಿತ್ತು ಹಾಕಿ’