Select Your Language

Notifications

webdunia
webdunia
webdunia
webdunia

‘ಟೀಂ ಇಂಡಿಯಾ ಈ ಇಬ್ಬರು ಆಟಗಾರರನ್ನು ಕಿತ್ತು ಹಾಕಿ’

‘ಟೀಂ ಇಂಡಿಯಾ ಈ ಇಬ್ಬರು ಆಟಗಾರರನ್ನು ಕಿತ್ತು ಹಾಕಿ’
Hyderabad , ಸೋಮವಾರ, 27 ಫೆಬ್ರವರಿ 2017 (09:22 IST)
ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತಿದ್ದಕ್ಕೆ ಟೀಂ ಇಂಡಿಯಾದ ಮೇಲೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಮಾಜಿ ನಾಯಕ  ಅಜರುದ್ದೀನ್ ಇಬ್ಬರು ಆಟಗಾರರನ್ನು ತಂಡದಿಂದ ಕಿತ್ತು ಹಾಕಬೇಕು ಎಂದು ಸಲಹೆ ನೀಡಿದ್ದಾರೆ.

ಬೌಲರ್ ಗಳಾದ ಜಯಂತ್ ಯಾದವ್ ಮತ್ತು ಇಶಾಂತ್ ಶರ್ಮಾರನ್ನು ತಂಡದಿಂದ ಕಿತ್ತೊಗೆಯಬೇಕು ಎಂದು ಅಜರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಮುಕ್ತರಾದ ಮೇಲೆ ಕ್ರಿಕೆಟ್ ಆಡಳಿತ ವಿಭಾಗಕ್ಕೆ ಮರಳಲು ಹವಣಿಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ಮುಂದಿನ ಪಂದ್ಯದಲ್ಲಿ ಈ ಇಬ್ಬರು ಆಟಗಾರರನ್ನು ಆಡುವ ಬಳಗದಿಂದ ಹೊರ ಹಾಕಬೇಕು ಎಂದಿದ್ದಾರೆ.

‘ಈ ಸರಣಿಯಲ್ಲಿ ಬ್ಯಾಟ್ಸ್ ಮನ್ ಗಳು ಸಂಪೂರ್ಣ ವಿಫಲರಾಗಿದ್ದರು. ಹಾಗಿದ್ದರೂ,  ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಿಚ್ ನಲ್ಲಿ ಇಷ್ಟೊಂದು ತಿರುವು ಸಿಗದು. ಹಾಗಾಗಿ ಇವರಿಬ್ಬರ ಅಗತ್ಯವಿಲ್ಲ” ಎಂದು ಮಾಜಿ ನಾಯಕ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಮ್ಮೆ ಸರಳತೆ ಮೆರೆದ ಧೋನಿ