Publish Date: Wed, 02 Sep 2020 (13:13 IST)
Updated Date: Wed, 02 Sep 2020 (13:14 IST)
ಮುಂಬೈ: ಇದ್ದಕ್ಕಿದ್ದಂತೆ ವೈಯಕ್ತಿಕ ಕಾರಣ ನೀಡಿ ಐಪಿಎಲ್ 13 ರ ಕೂಟದಿಂದ ಹೊರ ನಡೆಯಲು ನಿಜ ಕಾರಣವೇನೆಂದು ಸುರೇಶ್ ರೈನಾ ಕೊನೆಗೂ ಬಹಿರಂಗ ಹೇಳಿಕೆ ನೀಡಿದ್ದಾರೆ.
ರೈನಾ-ಧೋನಿ ನಡುವೆ ಮನಸ್ತಾಪವಾಗಿತ್ತು ಎಂಬಿತ್ಯಾದಿ ಸುದ್ದಿಗಳು ಹಬ್ಬಿತ್ತು. ಇದರ ಬೆನ್ನಲ್ಲೇ ರೈನಾ ಈಗ ಐಪಿಎಲ್ ನಿಂದ ಹೊರಬರಲು ನಿಜ ಕಾರಣವೇನೆಂದು ಹೇಳಿದ್ದಾರೆ. ಅಲ್ಲಿ ತಮಗೆ ಕೊರೋನಾ ಭಯ ಕಾಡಿದ್ದೇ ಹೊರಬರಲು ಕಾರಣ ಎಂದು ರೈನಾ ಹೇಳಿಕೊಂಡಿದ್ದಾರೆ.
‘ಬಯೋ ಸೆಕ್ಯೂರ್ ವಾತಾವರಣವೇ ಸುರಕ್ಷಿತವಲ್ಲವೆನಿಸಿದರೆ ಅಲ್ಲಿ ಇರುವುದು ಹೇಗೆ? ನನಗೆ ಇಬ್ಬರು ಮಕ್ಕಳು, ವಯಸ್ಸಾದ ತಂದೆ-ತಾಯಿ ಇದ್ದಾರೆ. ಅವರ ಮುಖವೇ ನನಗೆ ನೆನಪಿಗೆ ಬರುತ್ತಿತ್ತು. ಹೀಗಾಗಿ ಹೊರಬರಲು ನಿರ್ಧರಿಸಿದೆ. ಸಿಎಸ್ ಕೆ ನನಗೆ ಕುಟುಂಬವಿದ್ದಂತೆ. ಮಹಿ ಬಾಯಿ ನನಗೆ ಅಣ್ಣನಿದ್ದಂತೆ. ನಮ್ಮಿಬ್ಬರ ನಡುವೆ ಮನಸ್ತಾಪವಾಗಿತ್ತು ಎನ್ನುವುದು ಸುಳ್ಳು’ ಎಂದು ರೈನಾ ಸ್ಪಷ್ಟಪಡಿಸಿದ್ದಾರೆ.