Webdunia - Bharat's app for daily news and videos

Install App

ನೀನು ನನ್ನ ಗೆಳೆಯ ಎನ್ನುತ್ತಲೇ ಇಮ್ರಾನ್ ಖಾನ್ ಗೆ ಚಾಟಿ ಬೀಸಿದ ಸುನಿಲ್ ಗವಾಸ್ಕರ್

Webdunia
ಶುಕ್ರವಾರ, 22 ಫೆಬ್ರವರಿ 2019 (09:08 IST)
ಮುಂಬೈ: ಪುಲ್ವಾಮಾ ದಾಳಿ ಬಳಿಕ ಭಾರತದಲ್ಲಿ ಪಾಕಿಸ್ತಾನ ಪರ ಆಕ್ರೋಶ ಹೆಚ್ಚಾಗಿದೆ. ಈ ನಡುವೆ ತಮ್ಮ ಕ್ರಿಕೆಟ್ ಸ್ನೇಹಿತನೂ ಆಗಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೆಲವು ಸವಾಲು ಹಾಕಿದ್ದಾರೆ.


ನಾನು ರಾಜಕಾರಣಿ ಅಲ್ಲ. ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಭಾರತ ಪಂದ್ಯ ಬಹಿಷ್ಕರಿಸಬೇಕು ಎಂದು ಹೇಳುವ ಬಿಸಿ ರಕ್ತದ ತರುಣನೂ ಅಲ್ಲ. ನಾನು ನಿನ್ನ ಸ್ನೇಹಿತ. ಆವತ್ತು ನೀನು ಅಧಿಕಾರಕ್ಕೆ ಬಂದಾಗ ಹೇಳಿದೆಯಲ್ಲಾ? ಇನ್ಮುಂದೆ ಹೊಸ ಪಾಕಿಸ್ತಾನ ನೋಡುತ್ತೀರೆಂದು? ಎಲ್ಲಿದೆ ಅದು?

ಭಾರತ ಒಂದು ಹೆಜ್ಜೆಯಿಟ್ಟರೆ ನಾವು ಎರಡು ಹೆಜ್ಜೆ ಮುಂದೆ ಇಡುತ್ತೇವೆ ಎಂದಿದ್ದೆಯಲ್ಲಾ? ಮೊದಲು ನೀವು ಒಂದು ಹೆಜ್ಜೆಯಿಡಿ. ಆಮೇಲೆ ನೋಡಿ, ಭಾರತ ಎಷ್ಟು ಸ್ನೇಹದ ಹೆಜ್ಜೆಯಿಡುತ್ತದೆಂದು? ಗಡಿಯಲ್ಲಿ ನಡೆಯುವ ಉಗ್ರ ಚಟುವಟಿಕೆಗಳನ್ನು ನಿಲ್ಲಿಸು. ಆಮೇಲೆ ನೋಡು, ಭಾರತದವರು ಎಷ್ಟು ನಿಮ್ಮನ್ನು ಪ್ರಶಂಸಿಸುತ್ತಾರೆಂದು’ ಎಂದು ಸುನಿಲ್ ಗವಾಸ್ಕರ್ ನಯವಾಗಿಯೇ ಗೆಳೆಯನಿಗೆ ಚಾಟಿ ಬೀಸಿದ್ದಾರೆ.

ವಿಶೇಷವೆಂದರೆ ತಮ್ಮ ಪದಗ್ರಹಣ ಸಮಾರಂಭಕ್ಕೂ ಕಪಿಲ್ ದೇವ್, ನವಜೋತ್ ಸಿಂಗ್ ಜತೆಗೆ ಸುನಿಲ್ ಗವಾಸ್ಕರ್ ಗೂ ಇಮ್ರಾನ್ ಖಾನ್ ಆಹ್ವಾನವಿತ್ತಿದ್ದರು. ಆದರೆ ಸರ್ಕಾರದ ಒಪ್ಪಿಗೆಯಿಲ್ಲದೇ ನಾನು ಪಾಕಿಸ್ತಾನಕ್ಕೆ ಹೋಗಲಾರೆ ಎಂದು ಗವಾಸ್ಕರ್ ಭಾಗವಹಿಸಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB vs SRH: ಟಾಸ್ ಗೆದ್ದ ಆರ್‌ಸಿಬಿ, ಗುಜರಾತ್‌ನ್ನು ಹಿಂದಿಕ್ಕುವ ಗುರಿ

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್, ರೋಹಿತ್ ಅನುಪಸ್ಥಿತಿ ನಿಭಾಯಿಸುವುದು ದೊಡ್ಡ ಸವಾಲು ಎಂದ ಗಂಭೀರ್‌

India New Test Captain: ಹರಿದಾಡುತ್ತಿರುವ ಹೆಸರುಗಳಲ್ಲಿ ಇವರೇ ನಾಯಕನಾಗುವುದು ಪಕ್ಕಾ ಅಂತೇ

RCB vs SRH match: ಆರ್ ಸಿಬಿಗೆ ಇಂದು ಮರಳಿ ನಂ1 ಪಟ್ಟಕ್ಕೇರುವುದೇ ಗುರಿ

KL Rahul: ಕೆಎಲ್ ರಾಹುಲ್ ವೃತ್ತ ಎಳೆದ ಮೇಲೆಯೇ ಡೆಲ್ಲಿ ಕ್ಯಾಪಿಟಲ್ಸ್ ಗೆ ಈ ಗತಿಯಾಗಿದ್ದು

ಮುಂದಿನ ಸುದ್ದಿ
Show comments