Select Your Language

Notifications

webdunia
webdunia
webdunia
webdunia

ಕೊರೋನಾದಿಂದ ಸಂತ್ರಸ್ತರಾದವರಿಗೆ ಗಂಗೂಲಿ ನೀಡಲಿದ್ದಾರೆ 50 ಲಕ್ಷ ರೂ. ಪರಿಹಾರ

ಕೊರೋನಾದಿಂದ ಸಂತ್ರಸ್ತರಾದವರಿಗೆ ಗಂಗೂಲಿ ನೀಡಲಿದ್ದಾರೆ 50 ಲಕ್ಷ ರೂ. ಪರಿಹಾರ
ಮುಂಬೈ , ಗುರುವಾರ, 26 ಮಾರ್ಚ್ 2020 (09:48 IST)
ಮುಂಬೈ: ಕೊರೋನಾವೈರಸ್ ನಿಂದಾಗಿ ದೇಶದಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೀಡಾದವರು ಬಡ ವರ್ಗದವರು. ಅವರಿಗೆ ಈಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೆರವು ನೀಡಲು ಮುಂದಾಗಿದ್ದಾರೆ.


ಪಶ್ಚಿಮ ಬಂಗಾಲದಲ್ಲಿ ಕೊರೋನಾದಿಂದ ರಕ್ಷಿಸಿಕೊಳ್ಳಲು ಬಡವರ್ಗದವರನ್ನು ಸರ್ಕಾರಿ ಶಾಲೆಗಳಲ್ಲಿ ಇರಿಸಲಾಗಿದೆ. ಇವರಿಗೆ ಅಗತ್ಯ ದಿನಸಿ ಒದಗಿಸಲು ಗಂಗೂಲಿ 50 ಲಕ್ಷ ರೂ. ನೆರವು ನೀಡಲಿದ್ದಾರೆ ಎಂದು ಪಶ್ಚಿಮ ಬಂಗಾಲ ಕ್ರಿಕೆಟ್ ಅಸೋಸಿಯೇಷನ್ ಪ್ರಕಟಿಸಿದೆ.

ಗಂಗೂಲಿಯ ಈ ನಡೆ ಇತರರಿಗೂ ಸ್ಪೂರ್ತಿಯಾಗಲಿದೆ ಎಂದು ಕ್ರಿಕೆಟ್ ಸಂಸ್ಥೆ ಹೇಳಿದೆ. ದೇಶ ಸಂಪೂರ್ಣವಾಗಿ ಲಾಕ್ ಡೌನ್ ಆಗಿರುವುದರಿಂದ ಬಡವರ್ಗದವರು ನಿತ್ಯದ ಊಟಕ್ಕಾಗಿ ಪರದಾಡುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಕ್ ಹಂಚಿಕೆಯಲ್ಲಿ ತೊಡಗಿರುವ ಕ್ರಿಕೆಟಿಗ ಪಠಾಣ್ ಬ್ರದರ್ಸ್