Publish Date: Wed, 20 Jan 2021 (12:32 IST)
Updated Date: Wed, 20 Jan 2021 (12:34 IST)
ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ವೀರೇಂದ್ರ ಸೆಹ್ವಾಗ್ ವಿಶಿಷ್ಟವಾಗಿ ಹೊಗಳಿದ್ದಾರೆ.
ತಮ್ಮದೇ ಶೈಲಿಯಲ್ಲಿ ಮೆಮೆ ಮೂಲಕ ರಿಷಬ್ ರನ್ನು ಸೆಹ್ವಾಗ್ ಹೊಗಳಿದ್ದಾರೆ. ಇನ್ನು ಮುಂದೆ ಬ್ರಿಸ್ಬೇನ್ ಗೆ ಹೆಸರು ಬದಲಾಯಿಸಬೇಕು. ರಿಷಬ್ ಪಂತ್ ನಗರ್ ಎಂದು ಮರುನಾಮಕರಣ ಮಾಡಬೇಕು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಫೋಟೋ ಮೂಲಕ ಸೆಹ್ವಾಗ್ ಅಭಿನಂದಿಸಿದ್ದಾರೆ.