ವಿರಾಟ್ ಕೊಹ್ಲಿ ಕೊಟ್ಟ ಗಿಫ್ಟ್ ನೋಡಿ ಕಣ್ಣೀರು ಹಾಕಿದ್ದರಂತೆ ಸಚಿನ್ ತೆಂಡುಲ್ಕರ್

Webdunia
ಶುಕ್ರವಾರ, 18 ಫೆಬ್ರವರಿ 2022 (09:50 IST)
ಮುಂಬೈ: ಜಾಗತಿಕ ಕ್ರಿಕೆಟ್ ನಲ್ಲಿ ಸಚಿನ್ ಮತ್ತು ಕೊಹ್ಲಿ ನಡುವೆ ಎಷ್ಟೇ ಹೋಲಿಕೆಗಳು ನಡೆದರೂ ಈ ಇಬ್ಬರು ದಿಗ್ಗಜ ಕ್ರಿಕೆಟಿಗರಿಗೆ ಪರಸ್ಪರ ಗೌರವವಿದೆ. ಅದರಲ್ಲೂ ಕೊಹ್ಲಿ, ಸಚಿನ್ ರನ್ನು ತಮ್ಮ ಆರಾಧ್ಯ ದೈವವದಂತೆ ಪೂಜಿಸುತ್ತಾರೆ.

ಇಂತಿಪ್ಪ ಕೊಹ್ಲಿ, 2013 ರಲ್ಲಿ ಮುಂಬೈನಲ್ಲಿ ನಡೆದಿದ್ದ ಸಚಿನ್ ತೆಂಡುಲ್ಕರ್ ಅವರ ವಿದಾಯ ಟೆಸ್ಟ್ ಪಂದ್ಯದಲ್ಲಿ ಸ್ಮರಣೀಯ ಗಿಫ್ಟ್ ಒಂದನ್ನು ನೀಡಿದ್ದರಂತೆ. ಅದನ್ನು ನೋಡಿ ಸಚಿನ್ ಕಣ್ಣೀರು ಹಾಕಿ ಅದನ್ನು ಅವರಿಗೇ ವಾಪಸ್ ಮಾಡಿದ್ದರಂತೆ. ಈ ಘಟನೆಯನ್ನು ಸಚಿನ್ ಸಂದರ್ಶನವೊಂದರಲ್ಲಿ ನೆನೆಸಿಕೊಂಡಿದ್ದಾರೆ.

‘ಕೊನೆಯ ಬಾಲ್ ಬಳಿಕ ಓಕೆ, ಇದೇ ನನ್ನ ಕೊನೆಯ ಆಟ. ಮುಂದೆಂದೂ ನಾನು ಭಾರತದ ಪರವಾಗಿ ಮೈದಾನಕ್ಕಿಳಿಯಲ್ಲ ಎಂದು ಯೋಚಿಸಿದಾಗ ತುಂಬಾ ದುಃಖವಾಯಿತು. ಅದೇ ಬೇಸರದಲ್ಲಿ ಡ್ರೆಸ್ಸಿಂಗ್ ರೂಂಗೆ ಬಂದು ಒಂದು ಮೂಲೆಯಲ್ಲಿ ಒಬ್ಬನೇ ಕೂತು ಟವೆಲ್ ನಿಂದ ಕಣ್ಣೀರು ಒರೆಸುತ್ತಿದ್ದೆ.

ಆಗ ಕೊಹ್ಲಿ ನನ್ನ ಬಳಿಗೆ ಬಂದಿದ್ದರು. ಅವರ ತಂದೆ ನೀಡಿದ್ದ ಪವಿತ್ರ ದಾರವೊಂದನ್ನು ನನಗೆ ನೀಡಿದರು. ನಾನು ಅದನ್ನು ಕೆಲವು ಕ್ಷಣ ನನ್ನ ಬಳಿ ಇಟ್ಟುಕೊಂಡು ಕೊಹ್ಲಿಗೇ ಮರಳಿಸಿದೆ. ಇದು ನಿನ್ನೆ ತಂದೆ ನೀಡಿದ ಅತ್ಯಂತ ಅಮೂಲ್ಯ ಉಡುಗೊರೆ. ಇದನ್ನು ನೀನು ಬೇರೆ ಯಾರಿಗೂ ನೀಡಬಾರದು. ನಿನ್ನ ಕೊನೆಯ ಉಸಿರುವವರೆಗೂ ಇದು ನಿನ್ನ ಬಳಿಯೇ ಇರಬೇಕು. ಅದು ನನಗೆ ಅತ್ಯಂತ ಭಾವುಕ ಕ್ಷಣವಾಗಿತ್ತು. ಅದನ್ನು ಯಾವತ್ತೂ ಮರೆಯಲಾರೆ’ ಎಂದು ಸಚಿನ್ ಹೇಳಿಕೊಂಡಿದ್ದಾರೆ.

ಇನ್ನೊಂದೆಡೆ ಕೊಹ್ಲಿ ಕೂಡಾ ಈ ಘಟನೆಯನ್ನು ಸ್ಮರಿಸಿಕೊಂಡಿದ್ದು, ‘ನಾವು ಸಾಮಾನ್ಯವಾಗಿ ಪವಿತ್ರ ದಾರವನ್ನು ನಮ್ಮ ಮಣಿಕಟ್ಟಿಗೆ ಕಟ್ಟಿಕೊಳ್ಳುತ್ತೇವೆ. ನನ್ನ ತಂದೆ ಅವರು ಬಳಸುತ್ತಿದ್ದಂತಹ ಅಂತಹ ದಾರವನ್ನು ಕೊಟ್ಟಿದ್ದರು. ಅದನ್ನು ಯಾವತ್ತೂ ನನ್ನ ಬ್ಯಾಗ್ ನಲ್ಲಿಟ್ಟುಕೊಳ್ಳುತ್ತಿದ್ದೆ. ಅದು ನನ್ನ ಪಾಲಿಗೆ ಅತ್ಯಂತ ಅಮೂಲ್ಯ ವಸ್ತುವಾಗಿತ್ತು. ಅದನ್ನು ಯಾರಿಗೂ ಕೊಡಬಾರದು ಎಂದುಕೊಂಡಿದ್ದೆ. ಆದರೆ ಸಚಿನ್ ನನ್ನ ಪಾಲಿಗೆ ಸ್ಪೂರ್ತಿಯಾಗಿದ್ದರು, ಅವರ ಮೇಲೆ ನನಗೆ ಅಂತಹಾ ಪೂಜನೀಯ ಭಾವವಿತ್ತು. ಹೀಗಾಗಿ ಅದು ಅವರಿಗೆ ನನ್ನದೊಂದು ಸಣ್ಣ ಉಡುಗೊರೆಯಾಗಿತ್ತು’ ಎಂದು ಕೊಹ್ಲಿ ಹೇಳಿಕೊಂಡಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಾಲಾಶ್ ಜೊತೆ ಮದುವೆ ಮುರಿದ ಬೆನ್ನಲ್ಲೇ ಸ್ಮೃತಿ ಮಂಧಾನ ಮತ್ತು ಕ್ರಿಕೆಟಿಗರು ಮಾಡಿದ್ದೇನು ಗೊತ್ತಾ

ರೋಹಿತ್, ಕೊಹ್ಲಿಗೆ ದೇಶೀಯ ಟೂರ್ನಿ ಮಾಡಲು ಒತ್ತಡ ಹೇರಲಾಗಿದೆಯೇ

ಏಕದಿನ ಕ್ರಿಕೆಟ್‌ನಲ್ಲಿ ಮೋಡಿ ಬೆನ್ನಲ್ಲೇ ಕೊಹ್ಲಿ ವೈಜಾಗ್‌ನ ಪ್ರಮುಖ ದೇವಸ್ಥಾನಕ್ಕೆ ಭೇಟಿ

ಕೊನೆಗೂ ಪಲಾಶ್ ಮುಚ್ಚಲ್ ಜತೆಗಿನ ಮದುವೆ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಬೆಂಗಳೂರಿನಿಂದ ಐಪಿಎಲ್‌ ಪಂದ್ಯ ಕೈತಪ್ಪಲ್ಲ ಎಂದ ಡಿಕೆಶಿ

ಮುಂದಿನ ಸುದ್ದಿ
Show comments