Select Your Language

Notifications

webdunia
webdunia
webdunia
webdunia

ಬಿಸಿಸಿಐ ಹೊಸ ಬಾಸ್ ಗೆ ಮನವಿ ಸಲ್ಲಿಸಲಿರುವ ಎಸ್. ಶ್ರೀಶಾಂತ್

ಬಿಸಿಸಿಐ ಹೊಸ ಬಾಸ್ ಗೆ ಮನವಿ ಸಲ್ಲಿಸಲಿರುವ ಎಸ್. ಶ್ರೀಶಾಂತ್
Mumbai , ಶನಿವಾರ, 18 ಫೆಬ್ರವರಿ 2017 (10:34 IST)
ಮುಂಬೈ: ಹೇಗಾದರೂ ಮಾಡಿ ಮತ್ತೆ ಕ್ರಿಕೆಟ್ ಕಣಕ್ಕೆ ಮರಳಲು ಹವಣಿಸುತ್ತಿರುವ ಕ್ರಿಕೆಟಿಗ ಎಸ್. ಶ್ರೀಶಾಂತ್ ಬಿಸಿಸಿಐ ಹೊಸ ಆಡಳಿತ ಮಂಡಳಿಯೆದುರು ಮತ್ತೊಮ್ಮೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

 
ಬಿಸಿಸಿಐ ಹೊಸ ಆಡಳಿತ ಮಂಡಳಿ ಅಧ್ಯಕ್ಷ ವಿನೋದ್ ರೈ ಎದುರು ಮರಳಿ ಅವಕಾಶ ನೀಡುವಂತೆ ಕೇರಳ ವೇಗಿ ಮನವಿ ಸಲ್ಲಿಸಲಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಮುಕ್ತರಾದ ಮೇಲೆ ವಿದೇಶಿ ಕ್ರಿಕೆಟ್ ಲೀಗ್ ಮೂಲಕ ಕ್ರಿಕೆಟ್ ಕಣಕ್ಕೆ ಮರಳಲು ಅವಕಾಶ ನೀಡುವಂತೆ ಹಿಂದಿನ ಬಿಸಿಸಿಐ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು. ಆದರೆ ಒಪ್ಪಿಗೆ ಸಿಕ್ಕಿರಲಿಲ್ಲ.

ಇದೀಗ ಹೊಸ ಆಡಳಿತ ಮಂಡಳಿಯಾದರೂ ತನ್ನ ಕೋರಿಕೆ ಪುರಸ್ಕರಿಸೀತು ಎಂಬ ನಿರೀಕ್ಷೆ ಶ್ರೀಶಾಂತ್ ದ್ದು. ಇಲ್ಲವಾದರೆ ಅಂತಿಮವಾಗಿ ಕಾನೂನು ಹೋರಾಟ ನಡೆಸಲು ಸಜ್ಜಾಗುವುದಾಗಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಯಿಗಳಿಗೆ ಧೋನಿ ಕ್ರಿಕೆಟ್ ತರಬೇತಿ( ನೀವು ನೋಡಲೇ ಬೇಕಾದ ವಿಡಿಯೋ)