Select Your Language

Notifications

webdunia
webdunia
webdunia
webdunia

ಧೋನಿಯಂತಾಗಲು ಇನ್ನೂ ಮಾಗಬೇಕು ರಿಷಬ್ ಪಂತ್

ಧೋನಿಯಂತಾಗಲು ಇನ್ನೂ ಮಾಗಬೇಕು ರಿಷಬ್ ಪಂತ್
ಮುಂಬೈ , ಮಂಗಳವಾರ, 5 ನವೆಂಬರ್ 2019 (09:04 IST)
ಮುಂಬೈ: ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಆಗಾಗ ಏನೇನೋ ಮಾಡಲು ಹೋಗಿ ಇನ್ನೇನೋ ಆಗುತ್ತದೆ.


ಆದರೆ ಧೋನಿ ಅನುಕರಿಸಲು ಹೋಗುವ ರಿಷಬ್ ಇದುವರೆಗೆ ಬ್ಯಾಟಿಂಗ್ ಇರಲಿ, ಕೀಪಿಂಗ್ ಇರಲಿ ಎರಡರಲ್ಲೂ ಎಡವಿದ್ದಾರೆ. ಅದೂ ಸಾಲದೆಂಬಂತೆ ಡಿಆರ್ ಎಸ್ ತೆಗೆದುಕೊಳ್ಳುವಲ್ಲಿಯೂ ಆಗಾಗ ತಪ್ಪು ಮಾಹಿತಿ ನೀಡಿ ಅಭಿಮಾನಿಗಳಿಂದ ಟೀಕೆಗೊಳಗಾಗುತ್ತಲೇ ಇರುತ್ತಾರೆ.

ಧೋನಿಗೆ ಇರುವ ಅತೀ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅವರ ಶಾಂತ ಸ್ವಭಾವ, ಖಚಿತತೆ. ಇವೆರಡೂ ಕಲಿಯಲು ತಾಳ್ಮೆ ಬೇಕು. ಅದನ್ನು ಕಲಿಯಲು ರಿಷಬ್ ಗೆ ಇನ್ನೂ ಸಮಯ ಬೇಕು. ಆದರೆ ರಿಷಬ್ ರಲ್ಲಿ ಆತುರತೆಯಿದೆ, ತಾಳ್ಮೆ ಇನ್ನೂ ಕಲಿಯಬೇಕಿದೆ. ಅದೇ ಕಾರಣಕ್ಕೆ ಬಾಂಗ್ಲಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೂ ಡಿಆರ್ ಎಸ್ ವಿಚಾರದಲ್ಲಿ ಅವರು ತಪ್ಪು ನಿರ್ಧಾರ ತೆಗೆದುಕೊಂಡು ಟೀಕೆಗೊಳಗಾಗಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಸಮಯ ನೀಡಬೇಕು ಎಂದು ಟೀಂ ಇಂಡಿಯಾ ಚಿಂತಕರ ಚಾವಡಿ ಹೇಳುವುದು ಇದೇ ಕಾರಣಕ್ಕೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಗೆಯನ್ನೂ ಲೆಕ್ಕಿಸದೇ ಆಡಿದ್ದಕ್ಕೆ ಭಾರತ-ಬಾಂಗ್ಲಾ ಕ್ರಿಕೆಟಿಗರಿಗೆ ಥ್ಯಾಂಕ್ಸ್ ಹೇಳಿದ ಗಂಗೂಲಿ