Select Your Language

Notifications

webdunia
webdunia
webdunia
webdunia

ರವೀಂದ್ರಾ ಜಡೇಜಾ ಮ್ಯಾಜಿಕ್ ಸ್ಪೆಲ್

ರವೀಂದ್ರಾ ಜಡೇಜಾ ಮ್ಯಾಜಿಕ್ ಸ್ಪೆಲ್
ಚೆನ್ನೈ , ಮಂಗಳವಾರ, 20 ಡಿಸೆಂಬರ್ 2016 (16:30 IST)
ಚೆನ್ನೈ: ಅಂತಿಮ ಪಂದ್ಯದ ಹೀರೋ ಯಾರು ಎಂದರೆ ಎಲ್ಲರೂ ಕರುಣ್ ನಾಯರ್ ಕಡೆಗೇ ಬೆರಳು ತೋರಿಸಬಹುದು. ಆದರೆ ಇಂದು ಪಂದ್ಯ ಗೆಲ್ಲಲು ಕಾರಣ ರವೀಂದ್ರ ಜಡೇಜಾ.

ಸಪಾಟೆ ಪಿಚ್ ನಂತೆ ತೋರುತ್ತಿದ್ದ ಮೈದಾನದಲ್ಲಿ, ನೀರಸ ಡ್ರಾದತ್ತ ಸಾಗುತ್ತಿದ್ದ ಪಂದ್ಯವನ್ನು ಭಾರತದ ಕಡೆಗೆ ತಿರುಗಿಸಿದ್ದು, ರವೀಂದ್ರ ಜಡೇಜಾ. ಅವರು ಈವತ್ತು ಬ್ಯಾಟ್ಸ್ ಮನ್ ಗಳು ಔಟಾಗಲು ಕಾರಣರಾದರು. 7 ವಿಕೆಟ್ ತಾವೇ ಕಬಳಿಸಿದರೆ ಇನ್ನೆರಡು ಅದ್ಭುತ ಕ್ಯಾಚ್ ಪಡೆದರು.

ಅದರಲ್ಲೂ ಬೇರ್ ಸ್ಟೋ ವಿಕೆಟ್ ಪಡೆದ ಕ್ಯಾಚ್ ಅದ್ಭುತವಾಗಿತ್ತು. ಹಿಂದಕ್ಕೆ ಹೋಗಿ ಬೌಂಡರಿ ಗೆರೆಯ ಸಮೀಪ ಕಷ್ಟಪಟ್ಟು ಹಿಡಿದ ಕ್ಯಾಚ್ ನಿಂದ ಭಾರತಕ್ಕೆ ಗೆಲುವಿನ ಆಸೆ ಚಿಗುರಿತ್ತು. ಮತ್ತೊಮ್ಮೆ ಮೊದಲ ವಿಕೆಟ್ ಗೆ 100 ರನ್ ಪೇರಿಸಿಯೂ ಇಂಗ್ಲೆಂಡ್ ಬಾಂಗ್ಲಾದೇಶದ ವಿರುದ್ಧ ನಡೆದಂತೆ ನಾಟಕೀಯ ಕುಸಿತ ಕಂಡು ಪಂದ್ಯ ಸೋತಿತು. ರವಿಚಂದ್ರನ್ ಅಶ್ವಿನ್ ಅಂಗಳದಲ್ಲಿ ಈವತ್ತು ರವೀಂದ್ರ ಜಡೇಜಾ ಮ್ಯಾಜಿಕ್ ನಡೆಯಿತು. ಅವರ ಈ ಪ್ರದರ್ಶನಕ್ಕೆ ವಿಶೇಷ ಪ್ರಶಸ್ತಿಯನ್ನೂ ಪಡೆದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕರುಣ್ ನಾಯರ್ ತ್ರಿಶತಕವನ್ನು ಸ್ಮರಣೀಯವಾಗಿಸಿದ ಟೀಂ ಇಂಡಿಯಾ