Select Your Language

Notifications

webdunia
webdunia
webdunia
webdunia

ಜಲ್ಲಿಕಟ್ಟು ಪ್ರತಿಭಟನಾಕಾರರಿಗೆ ರವಿಚಂದ್ರನ್ ಅಶ್ವಿನ್ ವಿಶೇಷ ಮನವಿ

ಜಲ್ಲಿಕಟ್ಟು ಪ್ರತಿಭಟನಾಕಾರರಿಗೆ ರವಿಚಂದ್ರನ್ ಅಶ್ವಿನ್ ವಿಶೇಷ ಮನವಿ
Chennai , ಗುರುವಾರ, 19 ಜನವರಿ 2017 (09:01 IST)
ಚೆನ್ನೈ: ತಮಿಳುನಾಡಿನಲ್ಲಿ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ನಿಷೇಧ ಕುರಿತಂತೆ ಪರ ವಿರೋಧ ಪ್ರತಿಭಟನೆಗಳು ನಡೆಯುತ್ತಿದೆ. ಸಿನಿಮಾ, ಕ್ರೀಡಾ ತಾರೆಯರು ಪ್ರತಿಭಟನಾಕಾರರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತಿದ್ದಾರೆ.

ತಮಿಳುನಾಡು ಮೂಲದವರಾದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಪ್ರತಿಭಟನಾಕಾರರಿಗೆ ಶಾಂತಿಗೆ ಭಂಗವಾಗದಂತೆ ಪ್ರತಿಭಟನೆ ಮಾಡಿ ಎಂದು ಮನವಿ ಮಾಡಿದ್ದಾರೆ.  “ಶಾಂತಿಯುತ ಪ್ರತಿಭಟನೆ ಕಂಡುಬರುತ್ತಿದೆ. ಶಾಂತಿ, ಅಹಿಂಸಾತ್ಮಕ ಪ್ರತಿಭಟನೆ ನಮ್ಮ ಗುರಿ ಈಡೇರಿಸುತ್ತದೆ” ಎಂದು ಅಶ್ವಿನ್ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ನಿನ್ನೆ ಸಂಜೆ ಮರೀನಾ ಬೀಚ್ ಬಳಿ ಲಕ್ಷಾಂತರ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಿನಿಮಾ ತಾರೆಯರೂ ತಮ್ಮ ಟ್ವಿಟರ್, ಹಾಗೂ ಇತರ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಭಟನೆ ನೆಪದಲ್ಲಿ ಹಿಂಸೆ ನಡೆಸದಂತೆ ಮನವಿ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಒಲಿಂಪಿಕ್ಸ್ ಪದಕ ವಿಜೇತನ ಜತೆ ಕುಸ್ತಿ ಆಡಿ ಗೆದ್ದ ಬಾಬಾ ರಾಮ್ ದೇವ್!