Webdunia - Bharat's app for daily news and videos

Install App

ಮತ್ತೆ ಎನ್ ಸಿಎ ಕೋಚ್ ಹುದ್ದೆ ಬಯಸಿದ ರಾಹುಲ್ ದ್ರಾವಿಡ್!

Webdunia
ಗುರುವಾರ, 19 ಆಗಸ್ಟ್ 2021 (10:45 IST)
ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ ಸಿಎ)ದ ಮುಖ್ಯ ಕೋಚ್ ಹುದ್ದೆಯ ಮರುಆಯ್ಕೆ ಬಯಸಿದ್ದಾರೆ. ಈಗಾಗಲೇ ಈ ಹುದ್ದೆಯಲ್ಲಿರುವ ದ್ರಾವಿಡ್ ಮರು ಆಯ್ಕೆ ಬಯಸಿ ಬಿಸಿಸಿಐ ಗೆ ಅರ್ಜಿ ಹಾಕಿದ್ದಾರೆ.

ದ್ರಾವಿಡ್ ಅವರು ಎರಡು ವರ್ಷದ ಅವಧಿ ಮುಗಿದಿದೆ. ಹೀಗಾಗಿ ನೂತನ ಕೋಚ್ ಗಾಗಿ ಬಿಸಿಸಿಐ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿತ್ತು. ಬಿಸಿಸಿಐ ನ ಹೊಸ ಸಂವಿಧಾನದ ಪ್ರಕಾರ, ವಿಸ್ತರಣೆಗೆ ಯಾವುದೇ ಅವಕಾಶವಿಲ್ಲ. ನೇಮಕಾತಿ ಪ್ರಕ್ರಿಯೆಯನ್ನು ಹೊಸದಾಗಿ ಆರಂಭಿಸಬೇಕು.
ಆದರೆ ರಾಹುಲ್ ದ್ರಾವಿಡ್ ಮರು ಆಯ್ಕೆಗೆ ಅರ್ಜಿ ಸಲ್ಲಿಸಿದ್ದರೆ. ದ್ರಾವಿಡ್ ಹೊರತುಪಡಿಸಿ ಬೇರೆ ಯಾರೂ ಇಲ್ಲಿ ಅರ್ಜಿ ಹಾಕಿಲ್ಲ. ಅರ್ಜಿಗಳ ಸಲ್ಲಿಸಲು ಗಡುವು ಆಗಸ್ಟ್ 15 ರಂದು ನಿಗದಿಯಾಗಿತ್ತು. ಆದರೆ ಬೇರೆ ಯಾರೂ ಅರ್ಜಿ ಸಲ್ಲಿಸದ ಕಾರಣ ಭಾರತೀಯ ಬೋರ್ಡ್ ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಗೆ ಗಡುವು ವಿಸ್ತರಿಸಿದೆ.
ರಾಹುಲ್ ದ್ರಾವಿಡ್ ಅವರು ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಸೀಮಿತ ಓವರ್ ಗಳ ಸರಣಿಯಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿದ್ದರು. ಭಾರತದ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರೀ ಅವರ ಅವಧಿಯೂ ಟಿ20 ವಿಶ್ವಕಪ್ ನಂತರ ಮುಗಿಯಲಿದ್ದು, ನಂತರ ಹೊಸ ಕೋಚ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜಸ್ಪ್ರೀತ್ ಬುಮ್ರಾಗೆಲ್ಲಾ ನಾವು ಹೆದರಲ್ಲ ಎಂದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್

IND vs ENG: ಭಾರತದ ವಿರುದ್ಧ ಕಣಕ್ಕಿಳಿಯಲಿರುವ 11 ಆಟಗಾರರ ಪಟ್ಟಿ ಪ್ರಕಟಿಸಿದ ಇಂಗ್ಲೆಂಡ್

ತುಳುನಾಡಿನ ಅಳಿಯ ಸೂರ್ಯಕುಮಾರ್‌ಗೆ ಹರ್ನಿಯಾ ನೋವು: ಚಿಕಿತ್ಸೆಗೆ ಇಂಗ್ಲೆಂಡ್‌ನತ್ತ ಸ್ಟಾರ್‌ ಕ್ರಿಕೆಟಿಗ

ಸೂರ್ಯಕುಮಾರ್ ಯಾದವ್ ಗೆ ಕಾಡುತ್ತಿದೆ ಈ ಆರೋಗ್ಯ ಸಮಸ್ಯೆ: ಕೆಲವು ದಿನ ಕ್ರಿಕೆಟ್ ನಿಂದ ದೂರ

IND vs ENG: ಲೀಡ್ಸ್ ಪಿಚ್ ನಲ್ಲಿ ಮೊದಲ ದಿನ ಇಷ್ಟು ರನ್ ಬಂದರೂ ಸಾಕು

ಮುಂದಿನ ಸುದ್ದಿ
Show comments