ಪೃಥ್ವಿ ಶಾರನ್ನು ಕರೆಸಿಕೊಂಡು ಮಯಾಂಕ್, ಕೆಎಲ್ ರಾಹುಲ್ ಗೆ ಅವಮಾನಿಸಿತೇ ಟೀಂ ಇಂಡಿಯಾ?!

Webdunia
ಸೋಮವಾರ, 5 ಜುಲೈ 2021 (10:03 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆರಂಭಿಕ ಶುಬ್ನಂ ಗಿಲ್ ಗಾಯಗೊಂಡು ಹೊರಬೀಳುತ್ತಿದ್ದಂತೇ ಲಂಕಾ ಸರಣಿಯಲ್ಲಿದ್ದ ಪೃಥ್ವಿ ಶಾರನ್ನು ಆಂಗ್ಲರ ನಾಡಿಗೆ ಕರೆಸಿಕೊಳ್ಳುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.


ಈಗಾಗಲೇ ಇಂಗ್ಲೆಂಡ್ ನಲ್ಲಿರುವ ತಂಡದಲ್ಲಿ ಗಿಲ್ ಗಾಯಗೊಂಡರೂ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ನಡುವೆ ಆರಂಭಿಕ ಸ್ಥಾನಕ್ಕೆ ಪೈಪೋಟಿಯಿದೆ. ಈಗಿನ ತಂಡದಲ್ಲಿ ಗಿಲ್ ಇಲ್ಲದೇ ಹೋದರೂ ಆರಂಭಿಕ ಸ್ಥಾನಕ್ಕೆ ಆಟಗಾರರ ಕೊರತೆಯೇನೂ ಇಲ್ಲ.

ಹಾಗಿದ್ದರೂ ಈ ಇಬ್ಬರೂ ಅನುಭವಿ, ಪ್ರತಿಭಾವಂತ ಆಟಗಾರರನ್ನು ಕಡೆಗಣಿಸಿ ಪೃಥ್ವಿ ಶಾರನ್ನು ಕರೆಸಿಕೊಳ್ಳುತ್ತಿರುವುದು ಪ್ರಶ್ನೆ ಮೂಡಿಸಿದೆ. ಮಾಜಿ ನಾಯಕ ಕಪಿಲ್ ದೇವ್ ಅಂತೂ ಇದು ಈಗಾಗಲೇ ತಂಡದಲ್ಲಿರುವ ಆರಂಭಿಕ ಆಟಗಾರರಿಗೆ ಮಾಡಿದ ಅವಮಾನ ಎಂದಿದ್ದಾರೆ. ಗಿಲ್ ಇಲ್ಲದೇ ಹೋದರೆ ರಾಹುಲ್ ಅಥವಾ ಮಯಾಂಕ್ ಗೆ ಅವಕಾಶ ನೀಡಬಹುದಿತ್ತು. ಇಬ್ಬರೂ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಅನುಭವ ಹೊಂದಿದ್ದಾರೆ. ಹಾಗಿದ್ದರೂ ಶ್ರೀಲಂಕಾ ಸರಣಿಯಲ್ಲಿದ್ದ ಪೃಥ್ವಿ ಶಾರನ್ನು ಕರೆಸಿಕೊಳ್ಳುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಹಲವರಿಗೆ ಮೂಡಿದೆ. ಈ ಮೂಲಕ ರಾಹುಲ್ ಮತ್ತು ಮಯಾಂಕ್ ರನ್ನು ತಂಡದಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಎಲ್ಲೋದ್ರು ಆ ರೋಹಿತ್ ಶರ್ಮಾ: ಫ್ಯಾನ್ಸ್ ಗೆ ಬೇಸರ ತಂದ ಹಿಟ್ ಮ್ಯಾನ್

IND vs ENG: ಟೀಂ ಇಂಡಿಯಾ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್, ಕೆಎಲ್ ರಾಹುಲ್ ಗೈರು

ಮೂರನೇ ವಿಶ್ವಕಪ್‌ ಕಿರೀಟದ ಕನಸಿನಲ್ಲಿದ್ದ ಫ್ರಾನ್ಸ್‌ಗೆ ನಿರಾಸೆ: ಫೈನಲ್‌ಗೆ ಲಗ್ಗೆ ಹಾಕಿದ ಸ್ಪೇನ್‌

ಇಂವ ಹಿಂಗೇ ಗುರೂ.. ದಿನೇಶ್ ಕಾರ್ತಿಕ್ ಗೆ ಮೈದಾನದಲ್ಲೇ ಕಿಕ್ ಮಾಡಿದ ರೋಹಿತ್ ಶರ್ಮಾ Video

IND VS END ODI: ಗಿಲ್‌ ಅಬ್ಬರ, ಅಕ್ಷರ್‌ ಆಲ್‌ರೌಂಡ್‌ ಆಟ: ಇಂಗ್ಲೆಂಡ್‌ ನೆಲದಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದ ಭಾರತ

ಮುಂದಿನ ಸುದ್ದಿ
Show comments