Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಅವಗಣನೆ: ನೆಟ್ಟಿಗರಿಂದ ತೀವ್ರ ಟೀಕೆ

ಕೆಎಲ್ ರಾಹುಲ್ ಅವಗಣನೆ: ನೆಟ್ಟಿಗರಿಂದ ತೀವ್ರ ಟೀಕೆ
ಮೆಲ್ಬೋರ್ನ್ , ಶನಿವಾರ, 26 ಡಿಸೆಂಬರ್ 2020 (09:14 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಆಡುವ ಬಳಗದಿಂದ ಕೆಎಲ್ ರಾಹುಲ್ ರಂತಹ ಅನುಭವಿ ಆಟಗಾರರನ್ನು ಕೈ ಬಿಟ್ಟಿದ್ದಕ್ಕೆ ಟೀಂ ಇಂಡಿಯಾ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರಾಹುಲ್ ಗೆ ಅವಕಾಶ ನೀಡಬಹುದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ರವೀಂದ್ರ ಜಡೇಜಾರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಹನುಮ ವಿಹಾರಿ ಅಥವಾ ಸ್ವತಃ ನಾಯಕ ಅಜಿಂಕ್ಯಾ ರೆಹಾನೆಗಿಂತ ರಾಹುಲ್ ಉತ್ತಮ ಬ್ಯಾಟ್ಸ್ ಮನ್. ವಿರಾಟ್ ಅನುಪಸ್ಥಿತಿಯಲ್ಲಿ ತಂಡದ ಬ್ಯಾಟಿಂಗ್ ಗೆ ಅವರಿದ್ದರೆ ಬಲ ತುಂಬುತ್ತಿತ್ತು. ಆದರೆ ಅವರನ್ನೇ ಹೊರಗಿಟ್ಟು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮತ್ತೆ ಭಾರೀ ದೊಡ್ಡ ತಪ್ಪು ಮಾಡಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸೀಸ್ ಟೆಸ್ಟ್: ಆರಂಭಿಕ ಪತನದ ಬಳಿಕ ಚೇತರಿಸಿಕೊಂಡ ಆಸ್ಟ್ರೇಲಿಯಾ