Publish Date: Tue, 24 Nov 2020 (09:17 IST)
Updated Date: Tue, 24 Nov 2020 (09:21 IST)
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವಾಗ ತಂದೆಯ ನಿಧನದ ಸುದ್ದಿ ಕೇಳಿಯೂ ಕರ್ತವ್ಯದಲ್ಲಿ ಮುಂದುವರಿಸಲು ನಿರ್ಧರಿಸಿದ ಯುವ ವೇಗಿ ಮೊಹಮ್ಮದ್ ಸಿರಾಜ್ ಈಗ ತಂದೆಗಾಗಿ ಈ ಕೆಲಸ ಮಾಡಲು ಹೊರಟಿದ್ದಾರೆ.
ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ಸಿರಾಜ್ ನನ್ನ ತಂದೆ ನಾನು ದೇಶಕ್ಕಾಗಿ ಕ್ರಿಕೆಟ್ ಆಡಬೇಕೆಂದು ಕನಸು ಹೊಂದಿದ್ದರು. ಅದಕ್ಕಾಗಿ ಕಷ್ಟಪಟ್ಟು ತಾವು ಆಟೋ ಓಡಿಸಿ ನನ್ನನ್ನು ಮುಂದೆ ತಂದಿದ್ದರು. ಈಗ ಅವರ ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾಗೆ ಟೆಸ್ಟ್ ಸರಣಿ ಗೆಲ್ಲಲು ಸಹಾಯ ಮಾಡಿ ಅವರಿಗೆ ಸರಿಯಾದ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಸಿರಾಜ್ ಹೇಳಿಕೊಂಡಿದ್ದಾರೆ. ತಂದೆಗಾಗಿಯಾದರೂ ಟೆಸ್ಟ್ ಸರಣಿ ಗೆಲ್ಲಲು ಅವರು ಪಣತೊಟ್ಟಿದ್ದಾರೆ.