Select Your Language

Notifications

webdunia
webdunia
webdunia
webdunia

ರವಿಶಾಸ್ತ್ರಿಗೆ ಏಟು ಕೊಟ್ಟ ಮೊಹಮ್ಮದ್ ಅಜರುದ್ದೀನ್! ಏನಿದು ಗಲಾಟೆ?

ರವಿಶಾಸ್ತ್ರಿಗೆ ಏಟು ಕೊಟ್ಟ ಮೊಹಮ್ಮದ್ ಅಜರುದ್ದೀನ್! ಏನಿದು ಗಲಾಟೆ?
Hyderabad , ಬುಧವಾರ, 11 ಜನವರಿ 2017 (10:48 IST)
ಹೈದರಾಬಾದ್: ಸೌರವ್ ಗಂಗೂಲಿಯನ್ನು ಬೇಕೆಂದೇ ಭಾರತದ ಶ್ರೇಷ್ಠ ನಾಯಕರ ಪಟ್ಟಿಯಿಂದ ಕೈ ಬಿಟ್ಟ ರವಿ ಶಾಸ್ತ್ರಿಗೆ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ತಿರುಗೇಟು ಕೊಟ್ಟಿದ್ದಾರೆ. ದಾದ ನಾಯಕ ಎಂದು ಧೋನಿಯನ್ನು ಕರೆಯುವ ಮೂಲಕ ಗಂಗೂಲಿಯನ್ನು ಅವಮಾನಿಸಿದ್ದು, ಅಜರುದ್ದೀನ್ ಕೆಂಗಣ್ಣಿಗೆ ಕಾರಣವಾಗಿದೆ.


ತನ್ನ ವೈಯಕ್ತಿಕ ಅಸಮಾಧಾನಗಳೇನೇ ಇದ್ದರೂ, ಭಾರತೀಯ ಕ್ರಿಕೆಟ್ ಗೆ ಗಮನಾರ್ಹ ಕೊಡುಗೆ ಸಲ್ಲಿಸಿದ ಕ್ರಿಕೆಟಿಗನ ಹೆಸರನ್ನು ಕೈ ಬಿಡುವ ಮೂಲಕ ಬೇಕೆಂದೇ ಅವರಿಗೆ ಅವಮಾನ ಮಾಡುವುದು ಒಳ್ಳೆಯ ನಡವಳಿಕೆ ಅಲ್ಲ ಎಂದು ಅಜರುದ್ದೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಅವರಿಗೆ ಅಂಕಿ ಸಂಖ್ಯೆಗಳು ಕಣ್ಣಿಗೆ ಕಾಣಿಸುವುದಿಲ್ಲವೇ? ತನ್ನ ವೈಯಕ್ತಿಕ ಅಸಮಾಧಾನವನ್ನು ಹೊರ ಹಾಕಲು ಭಾರತೀಯ ಕ್ರಿಕೆಟ್ ನ್ನು ಬಲಿ ಕೊಡಬಾರದು” ಎಂದು ಶಾಸ್ತ್ರಿಗೆ ತಿರುಗೇಟು ಕೊಟ್ಟಿದ್ದಾರೆ.  ನಿನ್ನೆಯಷ್ಟೇ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹುದ್ದೆಗೆ ಅಜರುದ್ದೀನ್ ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ ಕ್ರಿಕೆಟಿಗ ವಾಸಿಂ ಅಕ್ರಂ ಬಂಧನಕ್ಕೆ ವಾರಂಟ್! ತಮಾಷೆ ಏನು ಗೊತ್ತಾ?