Webdunia - Bharat's app for daily news and videos

Install App

ಕೊಹ್ಲಿ-ರವಿಶಾಸ್ತ್ರಿ ಭಿನ್ನರಾಗ! ಕೋಚ್ ಹೇಳಿರೋದು ಒಂದು, ಕೊಹ್ಲಿ ಹೇಳುತ್ತಿರುವುದು ಮತ್ತೊಂದು!

Webdunia
ಬುಧವಾರ, 24 ಜನವರಿ 2018 (10:01 IST)
ಜೊಹಾನ್ಸ್ ಬರ್ಗ್: ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಸೋತ ಬಳಿಕ ಟೀಂ ಇಂಡಿಯಾದೊಳಗಿನ ಒಗ್ಗಟ್ಟಿನ ಬಗ್ಗೆ ಸಂಶಯ ಮೂಡಿದೆ. ಸರಣಿಗೆ ತಯಾರಿ ನಡೆಸಿರುವ ಕುರಿತಂತೆ ಕೋಚ್ ಮತ್ತು ನಾಯಕನ ಹೇಳಿಕೆಗಳು ಭಿನ್ನವಾಗಿರುವುದು ಇದಕ್ಕೆ ಕಾರಣ.
 

ಮೊನ್ನೆಯಷ್ಟೇ ಕೋಚ್ ರವಿಶಾಸ್ತ್ರಿ ನಾವು ಸರಣಿಗೆ ಸರಿಯಾಗಿ ತಯಾರಾಗಿ ಬಂದಿರಲಿಲ್ಲ. ನಮಗೆ ಕೆಲವು ಅಭ್ಯಾಸ ಪಂದ್ಯಗಳು ಬೇಕಿತ್ತು. ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಕಷ್ಟು ಅಭ್ಯಾಸ ಬೇಕಿತ್ತು ಎಂದಿದ್ದರು.

ಆದರೆ ಇಂದಿನ ಪಂದ್ಯಕ್ಕೆ ಮೊದಲು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ನಾಯಕ ವಿರಾಟ್ ಕೊಹ್ಲಿ, ತಮ್ಮ ತಂಡ ಪೂರ್ವ ಸಿದ್ಧತೆಯಿಲ್ಲದೇ ದ.ಆಫ್ರಿಕಾಗೆ ಬಂದಿಳಿದಿರಲಿಲ್ಲ ಎಂದಿದ್ದಾರೆ. ಇದರಿಂದಾಗಿ ಕೋಚ್ ಮತ್ತು ನಾಯಕನ ನಡುವೆ ಎಲ್ಲೋ ಭಿನ್ನರಾಗ ಮೂಡಿದಂತೆ ತೋರುತ್ತಿದೆ.

‘ನಾವು ಸರಿಯಾಗಿ ತಯಾರಾಗಿ ಬಂದಿರಲಿಲ್ಲ ಎಂದು ನನಗನಿಸುತ್ತಿಲ್ಲ. ನಮಗೆ ಒಂದು ವಾರಗಳ ಸಮಯ ಸಿಕ್ಕಿತ್ತು. ಅದರಲ್ಲಿ ಒಂದು ದಿನ ಮಾತ್ರ ಪ್ರಯಾಣದಲ್ಲಿ ಕಳೆದು ಹೋಯಿತು. ಒಂದು ಸರಣಿ ಸೋತಿದ್ದಕ್ಕೆ ನಾನು ಹೀಗೆ ಹೇಳುತ್ತಿಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ.

‘ತಯಾರಿ ಎನ್ನುವುದು ಒಬ್ಬರ ಜವಾಬ್ದಾರಿ ಅಲ್ಲ. ಎಲ್ಲರೂ ಸೇರಿ ಮಾಡುವಂತಹದ್ದು. ಸೋಲಿಗೆ ಬಾಹ್ಯ ಕಾರಣಗಳನ್ನು ಹುಡುಕುತ್ತಾ ಕೂರುವುದಿಲ್ಲ. ಇದು ನಮ್ಮ ತಪ್ಪಿನಿಂದ, ಬೇಜವಾಬ್ದಾರಿಯಿಂದ ಆದ ಸೋಲು’ ಎಂದು ಕೊಹ್ಲಿ, ಕೋಚ್ ಹೇಳಿಕೆಗೆ ತದ್ವಿರುದ್ಧವಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಾಂಗ್ ಕಾಂಗ್ ಮಹಿಳಾ ಕ್ರಿಕೆಟಿಗರಿಗೆ ಸ್ಮೃತಿ ಎಂದರೆ ಎಷ್ಟು ಗೌರವ ಗೊತ್ತಾ

ಹಾಂಗ್ ಕಾಂಗ್ ಬೌಲರ್ ಗಳನ್ನು ಗಲ್ಲಿ ಕ್ರಿಕೆಟ್ ನಂತೆ ಚೆಂಡಾಡಿದ ಸ್ಮೃತಿ ಮಂಧಾನ ಮಾಡಿದ ದಾಖಲೆಗಳ ಪಟ್ಟಿ ಇಲ್ಲಿದೆ

ಸ್ವಲ್ಪ ಹುಕ್ಕಾ ಸೇದಿ ಬರ್ತೀನಿ': ರಿಷಭ್ ಪಂತ್ ಜೊತೆ ಪಾರ್ಟಿ ಮಾಡುತ್ತಿದ್ದ ಎಂಎಸ್ ಧೋನಿ ವೀಡಿಯೋ ವೈರಲ್

ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿ ವಿವಿಎಸ್ ಲಕ್ಷ್ಮಣ್: ಏಷ್ಯನ್‌ ಗೇಮ್ಸ್‌ ಚಿನ್ನ ಉಳಿಸಿಕೊಳ್ಳಲು ಮಾಸ್ಟರ್‌ ಪ್ಲಾನ್‌

ರೋಹಿತ್ ಶರ್ಮಾ ಮುಂದೆ ಟೀಂ ಇಂಡಿಯಾ ಪರ ಆಡ್ತಾರಾ, ಇಂದು ಮಹತ್ವದ ನಿರ್ಧಾರ

ಮುಂದಿನ ಸುದ್ದಿ
Show comments