Select Your Language

Notifications

webdunia
webdunia
webdunia
webdunia

ರಿಷಬ್ ಪಂತ್ ಗೆ ಬಾಗಿಲು ಬಂದ್ ಮಾಡಿದ ಕೆಎಲ್ ರಾಹುಲ್!

ರಿಷಬ್ ಪಂತ್ ಗೆ ಬಾಗಿಲು ಬಂದ್ ಮಾಡಿದ ಕೆಎಲ್ ರಾಹುಲ್!
ಬೆಂಗಳೂರು , ಸೋಮವಾರ, 20 ಜನವರಿ 2020 (09:40 IST)
ಬೆಂಗಳೂರು: ಟೀಂ ಇಂಡಿಯಾದಲ್ಲಿ ಧೋನಿ ಉತ್ತರಾಧಿಕಾರಿ ಎಂದೇ ಗುರುತಿಸಿಕೊಂಡಿದ್ದ ರಿಷಬ್ ಪಂತ್ ವಿಕೆಟ್ ಕೀಪರ್ ಆಗಿ ಕಳಪೆ ಪ್ರದರ್ಶನ ನಡುವೆಯೇ ಗಾಯಗೊಂಡು ತಂಡದಿಂದ ಹೊರನಡೆದಾಗ ಹಂಗಾಮಿ ಕೀಪರ್ ಆಗಿ ಬಂದವರು ಕೆಎಲ್ ರಾಹುಲ್.


ಇದೀಗ ಕೆಎಲ್ ರಾಹುಲ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಆಗಿ ಕ್ಲಿಕ್ ಆಗಿರುವುದರಿಂದ ಸದ್ಯಕ್ಕೆ ಅವರಿಗೆ ಈ ಡಬಲ್ ರೋಲ್ ಖಾಯಂ ಆಗುವ ಸೂಚನೆ ಸಿಕ್ಕಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವಿನ ಬಳಿಕ ಮಾತನಾಡಿರುವ ನಾಯಕ ಕೊಹ್ಲಿ ಸದ್ಯಕ್ಕೆ ರಾಹುಲ್ ಅವರೇ ಸೀಮಿತ ಓವರ್ ಗಳ ಪಂದ್ಯದಲ್ಲಿ ಕೀಪರ್ ಆಗಿ ಮುಂದುವರಿಯಲಿದ್ದಾರೆ ಎಂದಿದ್ದಾರೆ.

ಆ ಮೂಲಕ ಅತ್ತ ಕಳಪೆ ಫಾರ್ಮ್, ಗಾಯದ ಸಮಸ್ಯೆಯಿಂದ ಹೈರಾಣಾಗಿರುವ ರಿಷಬ್ ಪಂತ್ ಗೆ ಟೀಂ ಇಂಡಿಯಾ ಬಾಗಿಲು ಮುಚ್ಚಿದಂತೆಯೇ ಆಗಿದೆ. ಇತ್ತ ಧವನ್ ಕೂಡಾ ಗಾಯಗೊಂಡಿರುವುದರಿಂದ ರಾಹುಲ್ ಗೆ ಮೆಚ್ಚಿನ ಆರಂಭಿಕ ಸ್ಥಾನವೂ ಸಿಕ್ಕಿ ಜಾಕ್ ಪಾಟ್ ಹೊಡೆದಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಗಾಯ ಮಾಡಿಕೊಂಡ ಶಿಖರ್ ಧವನ್: ನ್ಯೂಜಿಲೆಂಡ್ ಪ್ರವಾಸಕ್ಕೆ ಡೌಟ್