Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಐಪಿಎಲ್ ಸಂಭಾವನೆ ದೇಣಿಗೆ ನೀಡಲು ಮುಂದಾದ ಜಯದೇವ್ ಉನಾದ್ಕಟ್

webdunia
ಶನಿವಾರ, 1 ಮೇ 2021 (07:54 IST)
ನವದೆಹಲಿ: ಕೊರೋನಾ ಸಂಕಷ್ಟದಲ್ಲಿರುವ ಭಾರತದ ಸಹಾಯಕ್ಕೆ ವಿದೇಶೀ ಕ್ರಿಕೆಟಿಗರು ಧಾವಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ಕ್ರಿಕೆಟಿಗ, ಐಪಿಎಲ್ ನ ರಾಜಸ್ಥಾನ್ ರಾಯಲ್ಸ್ ಆಟಗಾರ ಜಯದೇವ ಉನಾದ್ಕಟ್ ಕೂಡಾ ಸಹಾಯ ಮಾಡಲು ಮುಂದಾಗಿದ್ದಾರೆ.


ಐಪಿಎಲ್ ನಲ್ಲಿ ತಮಗೆ ಸಿಗುವ ವೇತನದ ಶೇ.10 ರಷ್ಟು ಹಣವನ್ನು ಕೊರೋನಾ ಪರಿಹಾರ ನಿಧಿಗೆ ನೀಡಲು ಜಯದೇವ್ ಉನಾದ್ಕಟ್ ತೀರ್ಮಾನಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ.

‘ಕೊರೋನಾಗೆ ಅಗತ್ಯವಿರುವ ವೈದ್ಯಕೀಯ ಸೇವೆ ಖರೀದಿಸಲು ನಾನು ಐಪಿಎಲ್ ಸಂಭಾವನೆಯ ಶೇ.10 ರಷ್ಟನ್ನು ದೇಣಿಗೆ ನೀಡುತ್ತಿದ್ದೇನೆ. ನನ್ನ ಕುಟುಂಬಸ್ಥರು ಇದನ್ನು ಸರಿಯಾದ ಸ್ಥಳಕ್ಕೆ ತಲುಪಿಸುತ್ತಾರೆ’ ಎಂದು ವಿಡಿಯೋ ಸಂದೇಶ ಮೂಲಕ ಹೇಳಿಕೊಂಡಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದಿದ್ದರೆ ಈ ದೇಶದಲ್ಲಿ ನಡೆಯಲಿದೆ ಟಿ20 ವಿಶ್ವಕಪ್