Webdunia - Bharat's app for daily news and videos

Install App

ಟ್ವೀಟ್ ಮಾಡಿ ಅಪಹಾಸ್ಯಕ್ಕೀಡಾದ ಆರ್ ಸಿಬಿ

Webdunia
ಬುಧವಾರ, 4 ಡಿಸೆಂಬರ್ 2019 (09:31 IST)
ಬೆಂಗಳೂರು: ಐಪಿಎಲ್ ನಲ್ಲಿ ಇದುವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೇ ಇದ್ದರೂ ಭರ್ಜರಿ ಟ್ವೀಟ್ ಮಾಡಿ ಕೊಚ್ಚಿಕೊಂಡಿದ್ದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಪಹಾಸ್ಯಕ್ಕೀಡಾಗಿದೆ.


ಅಷ್ಟಕ್ಕೂ ಆರ್ ಸಿಬಿ ಮಾಡಿದ ಟ್ವೀಟ್ ಏನು ಗೊತ್ತಾ? ಚಂದ್ರನಲ್ಲಿಗೆ ಇಳಿದಿದ್ದ ವಿಕ್ರಮ್ ಲ್ಯಾಂಡರ್ ಪತ್ತೆಯಾಯಿತು. ಎಬಿಡಿ ವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಹೊಡೆದ ಚೆಂಡು ಎಲ್ಲಿ ಹೋಯಿತು ಎಂದು ಪತ್ತೆ ಮಾಡುವಿರಾ? ಎಂದು ಆರ್ ಸಿಬಿ ಅಭಿಮಾನಿಗಳಿಗೆ ಟ್ವೀಟ್ ಮೂಲಕ ಪ್ರಶ್ನೆ ಮಾಡಿತ್ತು.

ಇದಕ್ಕೆ ಅಭಿಮಾನಿಗಳು ಆರ್ ಸಿಬಿಯನ್ನು ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿದ್ದಾರೆ. ಇದುವರೆಗೆ ಐಪಿಎಲ್ ನಲ್ಲಿ ಟ್ರೋಫಿ ಗೆಲ್ಲುವುದು ಬಿಡಿ, ಒಂದೇ ಆವೃತ್ತಿಯಲ್ಲೂ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಅಂತಹದ್ದರಲ್ಲಿ ಇಂತಹ ಟ್ವೀಟ್ ಎಂದು ಗೇಲಿ ಮಾಡಿದ್ದಾರೆ. ಮೊದಲು ನೀವು ಐಪಿಎಲ್ ಟ್ರೋಫಿ ಹುಡುಕಿ. ಎಬಿಡಿ, ಕೊಹ್ಲಿ ಹೊಡೆದ ಚೆಂಡು ಪತ್ತೆ ಮಾಡುವ ಬದಲು ಮೊದಲು ನಾಸಾದಿಂದ ಪಂದ್ಯ ಗೆಲ್ಲಲು ಸಹಾಯ ಕೇಳಿ ಎಂದು ಲೇವಡಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಾಂಗ್ ಕಾಂಗ್ ಮಹಿಳಾ ಕ್ರಿಕೆಟಿಗರಿಗೆ ಸ್ಮೃತಿ ಎಂದರೆ ಎಷ್ಟು ಗೌರವ ಗೊತ್ತಾ

ಹಾಂಗ್ ಕಾಂಗ್ ಬೌಲರ್ ಗಳನ್ನು ಗಲ್ಲಿ ಕ್ರಿಕೆಟ್ ನಂತೆ ಚೆಂಡಾಡಿದ ಸ್ಮೃತಿ ಮಂಧಾನ ಮಾಡಿದ ದಾಖಲೆಗಳ ಪಟ್ಟಿ ಇಲ್ಲಿದೆ

ಸ್ವಲ್ಪ ಹುಕ್ಕಾ ಸೇದಿ ಬರ್ತೀನಿ': ರಿಷಭ್ ಪಂತ್ ಜೊತೆ ಪಾರ್ಟಿ ಮಾಡುತ್ತಿದ್ದ ಎಂಎಸ್ ಧೋನಿ ವೀಡಿಯೋ ವೈರಲ್

ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿ ವಿವಿಎಸ್ ಲಕ್ಷ್ಮಣ್: ಏಷ್ಯನ್‌ ಗೇಮ್ಸ್‌ ಚಿನ್ನ ಉಳಿಸಿಕೊಳ್ಳಲು ಮಾಸ್ಟರ್‌ ಪ್ಲಾನ್‌

ರೋಹಿತ್ ಶರ್ಮಾ ಮುಂದೆ ಟೀಂ ಇಂಡಿಯಾ ಪರ ಆಡ್ತಾರಾ, ಇಂದು ಮಹತ್ವದ ನಿರ್ಧಾರ

ಮುಂದಿನ ಸುದ್ದಿ
Show comments