Select Your Language

Notifications

webdunia
webdunia
webdunia
webdunia

ನಿವೃತ್ತರಾದ ಧೋನಿಗೆ ಗೌರವ: ಸುರೇಶ್ ರೈನಾರನ್ನು ಕಡೆಗಣಿಸಿದ ಬಿಸಿಸಿಐ

ನಿವೃತ್ತರಾದ ಧೋನಿಗೆ ಗೌರವ: ಸುರೇಶ್ ರೈನಾರನ್ನು ಕಡೆಗಣಿಸಿದ ಬಿಸಿಸಿಐ
ಮುಂಬೈ , ಸೋಮವಾರ, 17 ಆಗಸ್ಟ್ 2020 (09:15 IST)
ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಧೋನಿ ನಿವೃತ್ತಿ ಘೋಷಿಸಿದ ಅರ್ಧಗಂಟೆಯಲ್ಲೇ ಇನ್ನೊಬ್ಬ ಪ್ರತಿಭಾವಂತ ಕ್ರಿಕೆಟಿಗ ಸುರೇಶ್ ರೈನಾ ಕೂಡಾ ವಿದಾಯ ಹೇಳಿದ್ದರು. ಆದರೆ ಬಿಸಿಸಿಐ ಕೇವಲ ಧೋನಿಗೆ ಮಾತ್ರ ಗೌರವ ಸಲ್ಲಿಸಿದ್ದು, ರೈನಾರನ್ನು ಕಡೆಗಣಿಸಿದೆ.


ಧೋನಿ ಗೌರವಾರ್ಥ ಸಾಮಾಜಿಕ ಜಾಲತಾಣದಲ್ಲಿ ಥ್ಯಾಂಕ್ಯೂ ಸಂದೇಶ ಬರೆದು, ಹೊಸ ಕವರ್ ಫೋಟೋ ಪ್ರಕಟಿಸಿರುವ ಬಿಸಿಸಿಐ ಸುರೇಶ್ ರೈನಾ ಬಗ್ಗೆ ಒಂದೇ ಒಂದು ಮಾತನಾಡಿಲ್ಲ.

ಬಿಸಿಸಿಐ ಈ ನಡೆಯನ್ನು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಧೋನಿಯಂತೆ ರೈನಾ ಕೂಡಾ 2011 ರ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಭಾರತಕ್ಕೆ ಹಲವು ಬಾರಿ ಕೊಡುಗೆ ನೀಡಿದ್ದಾರೆ. ಹಾಗಿದ್ದರೂ ಅವರ ಬಗ್ಗೆ ಯಾಕೆ ಮಾತಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಇನ್ನಿಲ್ಲ