ಮನೀಶ್ ಪಾಂಡೆಗೆ ತೊಂದರೆ ಕೊಟ್ಟ ಕ್ಯಾಮರಾ ಮೆನ್ ಗೆ ಧೋನಿ ಮಾಡಿದ್ದೇನು?!

Webdunia
ಶುಕ್ರವಾರ, 22 ಡಿಸೆಂಬರ್ 2017 (11:49 IST)
ಕಟಕ್: ಮಹೇಂದ್ರ ಸಿಂಗ್ ಧೋನಿ ಎಂದರೆ ಕ್ಯಾಪ್ಟನ್ ಕೂಲ್ ಎಂದೇ ಜನಪ್ರಿಯ. ಅವರು ತಾಳ್ಮೆ ಕಳೆದುಕೊಳ್ಳುವುದು ಅಪರೂಪ. ಆದರೆ ಶ್ರೀಲಂಕಾ ವಿರುದ್ಧ ಪ್ರಥಮ ಟಿ20 ಪಂದ್ಯದಲ್ಲಿ ತಾಳ್ಮೆ ಕಳೆದುಕೊಂಡ ಪ್ರಸಂಗ ನಡೆದಿದೆ.
 

ಆಗ ಕ್ರೀಸ್ ನಲ್ಲಿ ಕನ್ನಡಿಗ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಬ್ಯಾಟಿಂಗ್ ಮಾಡುತ್ತಿದ್ದರು. ಧೋನಿ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದರು. ಈ ಸಂದರ್ಭದಲ್ಲಿ ಸೈಟ್ ಸ್ಕ್ರೀನ್ ಗೆ ಅಡ್ಡಲಾಗಿ ಓರ್ವ ಕ್ಯಾಮರಾಮೆನ್ ತಮ್ಮ ಕ್ಯಾಮರಾ ಹಿಡಿದುಕೊಂಡು ಪರ್ಫೆಕ್ಟ್ ಫೋಟೋಗಾಗಿ ಕಾದು ನಿಂತಿದ್ದರು.

ಆದರೆ ಕ್ಯಾಮರಾ ಮೆನ್ ನಿಂದಾಗಿ ಮನೀಶ್ ಗೆ ಸೈಟ್ ಸ್ಟ್ರೀನ್ ಗೆ ಅಡ್ಡವಾಗಿ ತೊಂದರೆಯಾಗುತ್ತಿತ್ತು. ಮನೀಶ್ ಆತನನ್ನು ಸರಿಯುವಂತೆ ಹೇಳಿದರೂ ಆ ಫೋಟೋಗ್ರಾಫರ್ ಕದಲದೇ ನಿಂತಿದ್ದರು. ಎಷ್ಟು ಹೇಳಿದರೂ ಫೋಟೋಗ್ರಾಫರ್ ಕೇಳದೇ ಇದ್ದಾಗ ಧೋನಿ ಸಿಟ್ಟು ನೆತ್ತಿಗೇರಿತ್ತು.

ನೇರವಾಗಿ ಸೈಟ್ ಸ್ಕ್ರೀನ್ ಬಳಿಗೆ ನಡೆದ ಧೋನಿ ಆತನ ಬಳಿ ಬದಿಗೆ ಸರಿಯಲು ಹೇಳಿದರು. ಧೋನಿ ಕೋಪದಿಂದ ಬರುತ್ತಿರುವುದನ್ನು ನೋಡಿದ ಫೋಟೋಗ್ರಾಫರ್ ಸರ ಸರನೆ ಸ್ಥಳದಿಂದ ಕ್ಯಾಮರಾ ಸಮೇತ ಜಾಗ ಖಾಲಿ ಮಾಡಿದರು. ಧೋನಿಯೂ ಮರಳಿ ಸ್ವ ಸ್ಥಾನಕ್ಕೆ ಬಂದು ಆಟ ಮುಂದುವರಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ರಿಕೆಟ್ ಸುಂದರಿ ಸ್ಮೃತಿ ಮಂಧಾನ ಮದುವೆ ಕಾರ್ಡ್ ಫೋಟೋ ವೈರಲ್

IND vs SA Test: ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ

ಜೀವ ಭಯಕ್ಕೆ ಪಾಕಿಸ್ತಾನದಿಂದ ವಾಪಸ್ ಆಗ್ತೀವಿ ಎಂದ ಶ್ರೀಲಂಕಾ ಕ್ರಿಕೆಟಿಗರು: ಬರಬೇಡಿ ಅಂತಿದೆ ಕ್ರಿಕೆಟ್ ಬೋರ್ಡ್

ಮೊದಲ ಮದುವೆಯ ವರ್ಷದೊಳಗೆ ಎರಡನೇ ಮದುವೆಯಾದ ಅಫ್ಘಾನ್ ಕ್ರಿಕೆಟರ್ ರಶೀದ್ ಖಾನ್‌

ಆರ್‌ಸಿಬಿ ಅಭಿಮಾನಿಗಳಿಗೆ ಶಾಕ್‌ : ಚಿನ್ನಸ್ವಾಮಿಯಿಂದಲೇ ಪಂದ್ಯಗಳು ಶಿಫ್ಟ್‌ ಸಾಧ್ಯತೆ

ಮುಂದಿನ ಸುದ್ದಿ
Show comments