Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಯಶಸ್ಸಿಗೆ ಧೋನಿ ನಾಯಕತ್ವವೊಂದೇ ಕಾರಣವಲ್ಲ: ಹರ್ಭಜನ್ ಸಿಂಗ್

ಟೀಂ ಇಂಡಿಯಾ ಯಶಸ್ಸಿಗೆ ಧೋನಿ ನಾಯಕತ್ವವೊಂದೇ ಕಾರಣವಲ್ಲ: ಹರ್ಭಜನ್ ಸಿಂಗ್
NewDelhi , ಸೋಮವಾರ, 30 ಜನವರಿ 2017 (11:47 IST)
ನವದೆಹಲಿ:  ಕ್ರಿಕೆಟಿಗ ಹರ್ಭಜನ್ ಸಿಂಗ್ ಎಂದರೆ ಹಾಗೇ. ಅವರು ಮುಖಕ್ಕೆ ಹೊಡೆದಾಂಗೆ ಮಾತನಾಡುವುದು ಅವರ ಚಾಳಿ. ಸಂದರ್ಶನವೊಂದರಲ್ಲಿ ಧೋನಿ ನಾಯಕತ್ವದ ಬಗ್ಗೆ ಕೇಳಿದ ಪ್ರಶ್ನೆಗೂ ಅವರು ಅದೇ ರೀತಿ ಉತ್ತರಿಸಿದ್ದಾರೆ.

 
ಧೋನಿ ನಾಯಕತ್ವದ ಬಗ್ಗೆ ಏನನಿಸುತ್ತದೆ ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಭಜಿ “ನನ್ನ ಪ್ರಕಾರ ಟೀಂ ಇಂಡಿಯಾ ಯಶಸ್ಸಿಗೆ ಧೋನಿಯೊಬ್ಬರೇ ಕಾರಣವಲ್ಲ. ಅವರ ಅದೃಷ್ಟಕ್ಕೆ ಅವರಿಗೆ ಒಳ್ಳೆಯ ಸಹ ಆಟಗಾರರು ಸಿಕ್ಕಿದರು. ನಾಯಕ ಒಬ್ಬನೇ ಪಂದ್ಯ ಗೆಲ್ಲಿಸಲು ಸಾಧ್ಯವಿಲ್ಲ. ಗೆಲವುಗಳು ಅವರ ವೈಯಕ್ತಿಕವಲ್ಲ. ತಂಡದ ಗೆಲುವು. ಅಂತಿಮವಾಗಿ ಅವರನ್ನು ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕನಾಗಿ ಎಲ್ಲರೂ ಸ್ಮರಿಸಿಕೊಳ್ಳಬಹುದು. ಆದರೆ ಅದೆಲ್ಲದರ ಕ್ರೆಡಿಟ್ ತಂಡಕ್ಕೆ ಸಲ್ಲಬೇಕು. ಅವರೊಬ್ಬರಿಗಲ್ಲ” ಎಂದು ಪರೋಕ್ಷವಾಗಿ ಧೋನಿಗೆ ಕ್ರೆಡಿಟ್ ನೀಡಲು ನಿರಾಕರಿಸಿದ್ದಾರೆ.

ಸದ್ಯ ಟೀಂ ಇಂಡಿಯಾಕ್ಕೆ ಆಯ್ಕೆಯಾಗದಿರುವ ಭಜಿ ಆ ಸಿಟ್ಟನ್ನು ಹಲವು ರೂಪದಲ್ಲಿ ಪ್ರಕಟ ಪಡಿಸುತ್ತಲೇ ಇರುತ್ತಾರೆ. ಯುವರಾಜ್ ಸಿಂಗ್ ವಾಪಸಾತಿಯಿಂದ ಸ್ಪೂರ್ತಿಗೊಂಡಿರುವ ಅವರು ನನ್ನಲ್ಲೂ ಗೆಲುವಿನ ಹಸಿವಿದೆ. ನಾನೂ ಟೀಂ ಇಂಡಿಯಾಕ್ಕೆ ಮರಳಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡುತ್ತೇನೆ ಎಂದು ಅಪ್ಪಟ ಪಂಜಾಬಿ ಶೈಲಿಯಲ್ಲಿ ತೊಡೆ ತಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನು ಮುಂದೆ ಧೋನಿ ಜಾರ್ಖಂಡ್ ಪರ ಆಡುತ್ತಾರೆ!