ಧೋನಿ ಮೇಲೆ ನಿವೃತ್ತಿಯ ಒತ್ತಡ ಹೇರುತ್ತಿರುವ ಬಿಸಿಸಿಐ

Webdunia
ಮಂಗಳವಾರ, 16 ಜುಲೈ 2019 (10:26 IST)
ಮುಂಬೈ: ವಿಶ್ವ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾಗೆ ವಿಶಿಷ್ಟ ಸ್ಥಾನ ಕಲ್ಪಿಸಿಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿದ ಮಾಜಿ ನಾಯಕ ಧೋನಿಗೆ ಇಂದು ಬಿಸಿಸಿಐ ಮೂಲಗಳೇ ನಿವೃತ್ತಿ ಹೇಳಲು ಪರೋಕ್ಷವಾಗಿ ಒತ್ತಡ ಹೇರುತ್ತಿವೆ.


ಇದು ಭಾರತ ತಂಡದ ಸ್ಥಿತಿ! ಹೆಚ್ಚಿನ ಹಿರಿಯ ಆಟಗಾರರಿಗೂ ಇದೇ ರೀತಿ ಬಲವಂತವಾಗಿ ನಿವೃತ್ತಿ ನೀಡುತ್ತಿರುವುದು ನಮ್ಮ ದೇಶದ ದುರಾದೃಷ್ಟ. ಹಿಂದೆ ಮಾಜಿ ನಾಯಕ ಗಂಗೂಲಿ, ದ್ರಾವಿಡ್, ಸಚಿನ್ ಕೂಡಾ ಇದಕ್ಕೆ ಹೊರತಾಗಲಿಲ್ಲ. ಇವರೆಲ್ಲಾ ಅಪ್ರತಿಮ ಆಟವಾಡುತ್ತಿದ್ದಾಗ ಹೊತ್ತು ಮೆರೆದವರು, ವೃತ್ತಿ ಜೀವನದ ಸಂಧ್ಯಾಕಾಲದಲ್ಲಿ ಅಷ್ಟೇ ಗೌರವದಿಂದ ಅವರಾಗಿಯೇ ನಿವೃತ್ತಿ ಹೇಳುವ ಬದಲು ಬಲವಂತವಾಗಿ ಹೊರದಬ್ಬಲಾಗುತ್ತಿರುವುದು ವಿಪರ್ಯಾಸ.

ಈಗ ಧೋನಿ ವಿಚಾರದಲ್ಲೂ ಅದುವೇ ನಡೆಯುತ್ತಿದೆ. ಭಾರತಕ್ಕೆ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಈಗ ನಿವೃತ್ತಿ ಹೇಳದಿದ್ದರೆ ಅವರನ್ನು ತಂಡದಿಂದ ಕೈಬಿಡುವ ತಂತ್ರಗಾರಿಕೆ ತೆರೆಹಿಂದೆ ನಡೆಯುತ್ತಿದೆ. ಈ ಮೂಲಕ ಬಲವಂತವಾಗಿ ಅವರ ಕೈಯಲ್ಲಿ ನಿವೃತ್ತಿ ಹೇಳಿಸುವ ಯತ್ನ ನಡೆಯುತ್ತಿದೆ.

ಇತ್ತೀಚೆಗೆ ನಿಧಾನಗತಿಯ ಬ್ಯಾಟಿಂಗ್ ನಿಂದ ಟೀಕೆಗೊಳಗಾಗಿದ್ದ ಧೋನಿ ಇನ್ನು ಮುಂದೆ ಪ್ರದರ್ಶನ ನೀಡದಿದ್ದರೆ ತಂಡಕ್ಕೆ ಆಯ್ಕೆ ಮಾಡದೇ ಇರಲು ಬಿಸಿಸಿಐ ಮೂಲಗಳು ಚಿಂತನೆ ನಡೆಸಿವೆ. ಹೀಗಾಗಿ ಪ್ರತಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದು ಧೋನಿಗೆ ಅನಿವಾರ್ಯವಾಗಿದೆ. ಇದರಿಂದಾಗಿ ಅವರು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಆಯ್ಕೆಯಾಗುವುದು ಅನುಮಾನವಾಗಿದೆ. ಈ ಅವಮಾನಗಳ ನಡುವೆ ಅವರೇ ನಿವೃತ್ತಿ ಘೋಷಿಸಿದರೂ ಅಚ್ಚರಿಯಿಲ್ಲ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಂಜು ಸ್ಯಾಮ್ಸನ್ ಗೆ ಸಿಕ್ತು ಕೋಚ್ ಗೌತಮ್ ಗಂಭೀರ್ ಶಹಬ್ಬಾಶ್ ಗಿರಿ

ವಿಶ್ವಕಪ್ ನಡುವೆ ತಂದೆಯನ್ನು ಕಳೆದುಕೊಂಡ ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್

ಭಾರತ, ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯ ಇಂದು: ಎಷ್ಟು ಗಂಟೆಗೆ ಲೈವ್ ವೀಕ್ಷಿಸಬೇಕು

T20 World Cup: ಅಬ್ಬರಿಸಿದ ಅಭಿಷೇಕ್‌, ತಿಲಕ್, ಹಾರ್ದಿಕ್, ಜಿಂಬಾಬ್ವೆಗೆ ಬಿಗ್ ಟಾರ್ಗೆಟ್

Ranji Trophy Final: ಮಯಾಂಕ್ ಅಗರ್ವಾಲ್ ಇಂದು ಶತಕ ಸಿಡಿಸಿದ್ದಕ್ಕೆ ಕರ್ನಾಟಕ ಬಚಾವ್

ಮುಂದಿನ ಸುದ್ದಿ
Show comments