Select Your Language

Notifications

webdunia
webdunia
webdunia
webdunia

ತ್ರಿಶತಕ ಬಾರಿಸಿದರೂ ಕನ್ನಡಿಗ ಕರುಣ್ ನಾಯರ್ ಮೇಲೆ ಕರುಣೆ ತೋರಲಿಲ್ಲ ನಾಯಕ ವಿರಾಟ್ ಕೊಹ್ಲಿ!

ತ್ರಿಶತಕ ಬಾರಿಸಿದರೂ ಕನ್ನಡಿಗ ಕರುಣ್ ನಾಯರ್ ಮೇಲೆ ಕರುಣೆ ತೋರಲಿಲ್ಲ ನಾಯಕ ವಿರಾಟ್ ಕೊಹ್ಲಿ!
Hyderabad , ಗುರುವಾರ, 9 ಫೆಬ್ರವರಿ 2017 (07:31 IST)
ಹೈದರಾಬಾದ್:  ಕನ್ನಡಿಗ ಕರುಣ್ ನಾಯರ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಬಾರಿಸಿ ಇತಿಹಾಸ ಬರೆದಿದ್ದರು. ಹಾಗಿದ್ದರೂ ಅವರಿಗೆ ಬಾಂಗ್ಲಾದೇಶ ವಿರುದ್ಧ ಇಂದಿನಿಂದ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ!

 
ಇದಕ್ಕೆ ಕಾರಣ, ಅಜಿಂಕ್ಯಾ ರೆಹಾನೆ. ರೆಹಾನೆ ಎರಡು ವರ್ಷಗಳಿಂದ ಕಠಿಣ ಪರಿಶ್ರಮ ಪಟ್ಟು ಭಾರತ ತಂಡಕ್ಕಾಗಿ ಶ್ರಮಿಸುತ್ತಿದ್ದಾರೆ. ಹಾಗಿರುವಾಗ ಒಂದು ತ್ರಿಶತಕ ಬಾರಿಸಿದರೆಂಬ ಕಾರಣಕ್ಕೆ ರೆಹಾನೆಯ ಕಠಿಣ ಪರಿಶ್ರಮವನ್ನು ಕಡೆಗಣಿಸಿ ಕರುಣ್ ನಾಯರ್ ಗೆ ಮಣೆ ಹಾಕಲಾಗದು ಎಂದು ಕೊಹ್ಲಿ ಹೇಳಿದ್ದಾರೆ.

ಹೀಗಾಗಿ ತ್ರಿಶತಕಧಾರಿ ಕರುಣ್ ಇಂದಿನ ಪಂದ್ಯದಲ್ಲಿ ಸ್ಥಾನ ವಂಚಿತರಾಗಿದ್ದಾರೆ. ಅವರ ಜಾಗಕ್ಕೆ ಅಜಿಂಕ್ಯಾ ರೆಹಾನೆ ಆಡುತ್ತಿದ್ದಾರೆ. ಸದ್ಯಕ್ಕೆ ಭಾರತ ತಂಡದಲ್ಲಿ ಪ್ರತಿಭಾವಂತರ ದಂಡೇ ಇದೆ. ಹೀಗಾಗಿ ಯಾರನ್ನು ಆಯ್ಕೆ ಮಾಡುವುದು, ಯಾರನ್ನು ಬಿಡುವುದು ಎಂಬ ಚಿಂತೆ ನಾಯಕನದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದುಡ್ಡಿಲ್ಲದೆ ಊಟಕ್ಕೂ ಪರದಾಡುತ್ತಿರುವ ರಾಹುಲ್ ದ್ರಾವಿಡ್ ಹುಡುಗರು!