Select Your Language

Notifications

webdunia
webdunia
webdunia
webdunia

ಸೈಯದ್ ಮುಷ್ತಾಕ್ ಟೂರ್ನಿಯಲ್ಲಿ ಮುಂಬೈ ತಂಡಕ್ಕೆ ಸಚಿನ್ ಪುತ್ರ ಅರ್ಜುನ್

ಸೈಯದ್ ಮುಷ್ತಾಕ್ ಟೂರ್ನಿಯಲ್ಲಿ ಮುಂಬೈ ತಂಡಕ್ಕೆ ಸಚಿನ್ ಪುತ್ರ ಅರ್ಜುನ್
ಮುಂಬೈ , ಭಾನುವಾರ, 3 ಜನವರಿ 2021 (10:16 IST)
ಮುಂಬೈ: ಸೈಯದ್ ಮುಷ್ತಾಕ್ ಟಿ20 ಟೂರ್ನಿಗೆ ಪ್ರಕಟಿಸಲಾಗಿರುವ ಮುಂಬೈ ತಂಡದಲ್ಲಿ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಸೇರ್ಪಡೆಯಾಗಿದ್ದಾರೆ.


ಈ ಮೊದಲು ಬಿಸಿಸಿಐ 20 ಸದಸ್ಯರಿಗೆ ಮಾತ್ರ ಅವಕಾಶ ಕಲ್ಪಿಸಿತ್ತು. ಆದರೆ ತಂಡದಲ್ಲಿ ಆಟಗಾರರ ಸಂಖ್ಯೆಯನ್ನು 22 ಕ್ಕೆ ಏರಿಸಿದ ಬಳಿಕ ಅರ್ಜುನ್ ಗೆ ಸ್ಥಾನ ಸಿಕ್ಕಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಹಿರಿಯರ ಬಳಗಕ್ಕೆ ಅರ್ಜುನ್ ಆಯ್ಕೆಯಾಗಿದ್ದಾರೆ. ಬೌಲಿಂಗ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಅರ್ಜುನ್ ಬ್ಯಾಟಿಂಗ್ ಕೂಡಾ ಮಾಡಬಲ್ಲರು. ಈಗಾಗಲೇ ಸಾಕಷ್ಟು ಬಾರಿ ಮುಂಬೈ ಇಂಡಿಯನ್ಸ್, ಟೀಂ ಇಂಡಿಯಾ ನೆಟ್ ಪ್ರಾಕ್ಟೀಸ್ ವೇಳೆ ನೆಟ್ ಬೌಲರ್ ಆಗಿ ದಿಗ್ಗಜ ಕ್ರಿಕೆಟಿಗರಿಗೆ ಬೌಲಿಂಗ್ ಮಾಡಿದ ಅನುಭವ ಹೊಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೀಫ್ ಸೇವನೆ ಮಾಡಿದ್ರಾ ರೋಹಿತ್ ಶರ್ಮಾ! ಅಭಿಮಾನಿಯ ಮೇಲೆ ನೆಟ್ಟಿಗರು ಗರಂ