Select Your Language

Notifications

webdunia
webdunia
webdunia
webdunia

ಮಗುಚಿಕೊಂಡ ದೋಣಿ: ಕ್ರಿಕೆಟರ್ ಕರುಣ್ ನಾಯರ್ ಅಪಾಯದಿಂದ ಪಾರು

ಮಗುಚಿಕೊಂಡ ದೋಣಿ: ಕ್ರಿಕೆಟರ್ ಕರುಣ್ ನಾಯರ್ ಅಪಾಯದಿಂದ ಪಾರು
ಪತಾನಮಟ್ಟಿಟ್ಟ , ಗುರುವಾರ, 21 ಜುಲೈ 2016 (17:18 IST)
ಕೇರಳದ ಪಂಪಾನದಿಯಲ್ಲಿ ಸ್ನೇಕ್ ಬೋಟ್ ಮಗುಚಿಕೊಂಡು ಕರ್ನಾಟಕದ ಕ್ರಿಕೆಟ್ ಆಟಗಾರ ಕರುಣ್ ನಾಯರ್ ಕೂದಳೆಲೆಯ ಅಂತರದಿಂದ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಇಬ್ಬರು ಯುವಕರು ಇನ್ನೂ ದೋಣಿಯಿಂದ ನಾಪತ್ತೆಯಾಗಿದ್ದು ದೋಣಿಯಲ್ಲಿ ಸುಮಾರು 100 ಜನರು ಪ್ರಯಾಣಿಸುತ್ತಿದ್ದರು. ಪಾರ್ಥಸಾರಥಿ ಮಂದಿರದ ದೇವಾಲಯದ ಉತ್ಸವ ವಲ್ಲಾ ಸಾದ್ಯಾದಲ್ಲಿ ಭಾಗವಹಿಸಲು ನಾಯರ್ ಇನ್ನಿತರರ ಜತೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ.
 
ಬೆಳಿಗ್ಗೆ 11.45ಕ್ಕೆ ದೋಣಿಯಲ್ಲಿದ್ದ ಜನರು ಅರಣ್ ಮುಲಾಲಾ ದೇವಾಲಯಕ್ಕೆ ಪೂಜೆ ಸಲ್ಲಿಸುವುದಕ್ಕಾಗಿ ಮುಟ್ಟುವ ಹಂತದಲ್ಲೇ ದೋಣಿ ಮಗುಚಿಕೊಂಡು ಅಪಘಾತ ಸಂಭವಿಸಿತು. ರಕ್ಷಣಾ ದೋಣಿಗಳು ಸ್ಥಳಕ್ಕೆ ಧಾವಿಸಿ ಅದರಲ್ಲಿದ್ದ ಈಜುಗಾರರು  ಜನರನ್ನು ರಕ್ಷಿಸಿ ಅಪಾಯದಿಂದ ಪಾರುಮಾಡಿದ್ದಾರೆ.
 
24 ವರ್ಷದ ನಾಯಕ್ ಕರ್ನಾಟಕದ ರಣಜಿಗೆ ಆಡುತ್ತಿದ್ದು, ಜಿಂಬಾಬ್ವೆಗೆ ಇತ್ತೀಚೆಗೆ ತೆರಳಿದ್ದ ಎರಡನೇ ಸಾಲಿನ ಭಾರತ ತಂಡದಲ್ಲಿ ಜತೆಯಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ರಿಯೊ ಒಲಿಂಪಿಕ್ಸ್‌ಗೆ ಐಸಿಸ್ ಜಿಹಾದಿಗಳ ಕರಿನೆರಳು