Select Your Language

Notifications

webdunia
webdunia
webdunia
webdunia

ರಿಷಬ್ ಪಂತ್ ರೂಪದಲ್ಲಿ ವೃದ್ಧಿಮಾನ್ ಸಹಾಗೆ ಒಲಿದ ಅದೃಷ್ಟ

ರಿಷಬ್ ಪಂತ್
ಮುಂಬೈ , ಶುಕ್ರವಾರ, 27 ಸೆಪ್ಟಂಬರ್ 2019 (08:50 IST)
ಮುಂಬೈ: ಒಂದು ಕಾಲದಲ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಿರ ವಿಕೆಟ್ ಕೀಪರ್ ಆಗಿದ್ದ ವೃದ್ಧಿಮಾನ್ ಸಹಾ ಗಾಯಗೊಂಡ ಬಳಿಕ ತಂಡದಿಂದ ಹೊರಹೋಗುವ ಪರಿಸ್ಥಿತಿ ಬಂದಿತ್ತು.

 

ಆ ಬಳಿಕ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ರಿಷಬ್ ಪಂತ್ ರನ್ನು ಬೆಳೆಸುವ  ಅವಸರದಲ್ಲಿ ಸಹಾರನ್ನು ಮರೆತೇಬಿಟ್ಟಿತ್ತು. ತಂಡದಲ್ಲಿದ್ದರೂ ಆಡುವ  ಅವಕಾಶ ಸಿಗಲಿಲ್ಲ. ಈಗ ರಿಷಬ್ ಪಂತ್ ಫಾರ್ಮ್ ಕಳೆದುಕೊಂಡಿದ್ದಕ್ಕೆ ವೃದ್ಧಿಮಾನ್ ಸಹಾಗೆ ಅದೃಷ್ಟ ಒಲಿಯುವ ಲಕ್ಷಣ ತೋರುತ್ತಿದೆ.

ಅಕ್ಟೋಬರ್ 2 ರಿಂದ ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ರಿಷಬ್ ಪಂತ್ ಬದಲಿಗೆ ವೃದ್ಧಿಮಾನ್ ಸಹಾ ವಿಕೆಟ್ ಕೀಪರ್ ಆಗಿ ಆಡುವ ಸಾಧ್ಯತೆಯಿದೆ. ಸದ್ಯಕ್ಕೆ ರಿಷಬ್ ಗೆ ಸೀಮಿತ ಓವರ್ ಗಳಲ್ಲಿ ಅವಕಾಶ ನೀಡಿ ವೃದ್ಧಿಮಾನ್ ಸಹಾರನ್ನೇ ಟೆಸ್ಟ್ ನಲ್ಲಿ ಮುಂದುವರಿಸಲು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಚಿಂತನೆ ನಡೆಸುತ್ತಿದೆ. ಹೀಗಾಗಿ ಮತ್ತೆ ವೃದ್ಧಿಮಾನ್ ಟೆಸ್ಟ್ ಗ್ಲೌಸ್ ತೊಡಲು ಸಿದ್ಧತೆ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಪಂತ್ ಗೆ ಬೈಬೇಡಿ, ನಾವು ಸರಿ ಮಾಡ್ತೀವಿ ಎಂದ ಕೋಚ್ ರವಿಶಾಸ್ತ್ರಿ