Publish Date: Thu, 26 Sep 2019 (10:19 IST)
Updated Date: Thu, 26 Sep 2019 (10:22 IST)
ಮುಂಬೈ: ಟೀಂ ಇಂಡಿಯಾದಲ್ಲಿ ಸಾಕಷ್ಟು ಅವಕಾಶ ಸಿಕ್ಕರೂ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಮೇಲೆ ಟೀಕಾಪ್ರಹಾರವಾಗುತ್ತಿದೆ. ಇದೀಗ ಯುವ ವಿಕೆಟ್ ಕೀಪರ್ ಪರವಾಗಿ ಕೋಚ್ ರವಿಶಾಸ್ತ್ರಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ರಿಷಬ್ ಪರವಾಗಿ ಕೋಚ್ ರವಿಶಾಸ್ತ್ರಿ ಮಾತನಾಡಿದ್ದಾರೆ. ಈಗಲೇ ರಿಷಬ್ ಮೇಲೆ ಟೀಕಾಪ್ರಹಾರ ನಡೆಸುವುದು ಬೇಡ ಎಂದಿದ್ದಾರೆ.
‘ವೈಟ್ ಬಾಲ್ ಕ್ರಿಕೆಟ್ ನಲ್ಲಿ ಅತ್ಯುತ್ತಮ ಕ್ರಿಕೆಟಿಗರಲ್ಲಿ ರಿಷಬ್ ಕೂಡಾ ಒಬ್ಬರು. ಅವರು ವಿಶ್ವದರ್ಜೆಯ ಆಟಗಾರ ಮತ್ತು ಒಬ್ಬ ಉತ್ತಮ ಮ್ಯಾಚ್ ವಿನ್ನರ್. ಇಂತಹ ಕೆಲವೇ ಕ್ರಿಕೆಟಿಗರು ನಮಗೆ ಸಿಗಲು ಸಾಧ್ಯ. ಸ್ವಲ್ಪ ತಾಳ್ಮೆಯಿಂದಿರೋಣ. ಪಂತ್ ವಿಶೇಷ ಹುಡುಗ. ಅವನು ಈಗಾಗಲೇ ಸಾಕಷ್ಟು ಮಾಡಿದ್ದಾನೆ. ಈಗಷ್ಟೇ ಕಲಿಯುತ್ತಿದ್ದಾನೆ. ಈ ತಂಡದ ಮ್ಯಾನೇಜ್ ಮೆಂಟ್ ಅವನನ್ನು ಮತ್ತೆ ಫಾರ್ಮ್ ಗೆ ಮರಳಿಸಲಿದೆ’ ಎಂದು ರವಿಶಾಸ್ತ್ರಿ ಅಭಯ ನೀಡಿದ್ದಾರೆ.