Webdunia - Bharat's app for daily news and videos

Install App

WPL 2024: ಚಿನ್ನಸ್ವಾಮಿಯಲ್ಲಿ ಸ್ಮೃತಿ ಮಂದಾನಗೆ ಚಿಯರ್ ಬಲು ಜೋರು

Krishnaveni K
ಶುಕ್ರವಾರ, 23 ಫೆಬ್ರವರಿ 2024 (20:15 IST)
Photo Courtesy: Twitter
ಬೆಂಗಳೂರು: ಡಬ್ಲ್ಯುಪಿಎಲ್ 2 ಟೂರ್ನಿಗೆ ಚಿನ್ನಸ್ವಾಮಿ ಮೈದಾನದಲ್ಲಿ ಚಾಲನೆ ಸಿಕ್ಕಿದೆ. ಎಲ್ಲಾ ಐದೂ ತಂಡಗಳ ನಾಯಕರ ಸಮ್ಮುಖದಲ್ಲಿ, ಪ್ರೇಕ್ಷಕರಿಂದ ಭರ್ತಿಯಾಗಿದ್ದ ಮೈದಾನದಲ್ಲಿ ಮಹಿಳೆಯರ ಕ್ರಿಕೆಟ್ ಲೀಗ್ ಆರಂಭವಾಗಿದೆ.

ಎರಡನೇ ಸೀಸನ್ ಆರಂಭಕ್ಕೆ ಮೊದಲು ಬಾಲಿವುಡ್ ನಟರಿಂದ ನೃತ್ಯ, ಮನರಂಜನಾ ಕಾರ್ಯಕ್ರಮಗಳು ನಡೆದವು. ಚಿನ್ನಸ್ವಾಮಿ ಮೈದಾನದಲ್ಲಿ ಕ್ರಿಕೆಟ್ ಎಂದರೆ ಕೇಳಬೇಕೇ? ಅಭಿಮಾನಿಗಳು ಕಿಕ್ಕಿರಿದು ಕೂತಿದ್ದರು. ಜೊತೆಗೆ ಶಾರುಖ್ ಖಾನ್, ವರುಣ್ ಧವನ್, ಸಿದ್ದಾರ್ಥ್ ಮಲ್ಹೋತ್ರಾ ಸೇರಿದಂತೆ ಬಾಲಿವುಡ್ ನಟರಿಂದ ಜನಪ್ರಿಯ ಹಾಡುಗಳಿಗೆ ನೃತ್ಯವೂ ಇದ್ದಿದ್ದರಿಂದ ಪ್ರೇಕ್ಷಕರು ಫುಲ್ ಎಂಜಾಯ್ ಮಾಡಿದರು.

ಕಳೆದ ಬಾರಿ ಮುಂಬೈನ ವಾಂಖೆಡೆ ಮೈದಾನದಲ್ಲಿ ಟೂರ್ನಿ ನಡೆದಿತ್ತು. ಆದರೆ ಚಿನ್ನಸ್ವಾಮಿ ಅಂಗಣದಲ್ಲಿ ಸಿಕ್ಕಷ್ಟು ಪ್ರೇಕ್ಷಕರ ಬೆಂಬಲ ಅಲ್ಲಿ ಸಿಕ್ಕಿರಲಿಲ್ಲ. ಈ ಬಾರಿ ಆರಂಭಿಕ ಹಂತದ ಪಂದ್ಯಗಳು ಚಿನ್ನಸ್ವಾಮಿಯಲ್ಲಿ ಮತ್ತು ಅಂತಿಮ ಹಂತದ ಪಂದ್ಯಗಳು ಮುಂಬೈನಲ್ಲಿ ನಡೆಯುತ್ತಿವೆ.

ಚಿನ್ನಸ್ವಾಮಿ ಅಂಗಣದಲ್ಲಿ ಆರ್ ಸಿಬಿ ನಾಯಕಿ ‘ಕ್ವೀನ್’ ಸ್ಮೃತಿ ಮಂದಾನ ಸ್ಟೇಡಿಯಂಗೆ ಬರುತ್ತಿದ್ದಂತೇ ಪ್ರೇಕ್ಷಕರಿಂದ ಭಾರೀ ಹರ್ಷೋದ್ಗಾರ ಕಂಡುಬಂತು. ಆರ್ ಸಿಬಿ ಅಭಿಮಾನಿಗಳಷ್ಟು ವಿಧೇಯ ಅಭಿಮಾನಿಗಳು ಇನ್ನೊಬ್ಬರಿಲ್ಲ ಎಂದು ಪ್ರೇಕ್ಷಕರು ಸಾಬೀತುಪಡಿಸಿದರು.

ಇಂದು ಮೊದಲ ಪಂದ್ಯದಲ್ಲಿ ಮುಂಬೈ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಡೆಲ್ಲಿ ಇತ್ತೀಚೆಗಿನ ವರದಿ ಬಂದಾಗ 5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 23 ರನ್ ಗಳಿಸಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB vs LSG match: ಲಕ್ನೋ ವಿರುದ್ಧ ಇಂದು ಆರ್ ಸಿಬಿ ಸೋಲುವಂತೆಯೇ ಇಲ್ಲ

RCB vs LSG match: ತಾಕತ್ತಿದ್ದರೆ ದಿಗ್ವೇಶ್ ರಾಠಿ ಕೊಹ್ಲಿ ವಿಕೆಟ್ ತೆಗೆದು ಹೀಗೆ ಸಂಭ್ರಮಿಸಲಿ ನೋಡೋಣ

ಐಪಿಎಲ್‌ ಒತ್ತಡದ ಮಧ್ಯೆ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ

ಆ ಒಂದು ಕರೆಗಾಗಿ ಎಂಟು ವರ್ಷ ಕಾದೆ: ವನವಾಸ ಮುಗಿಸಿ ಟೆಸ್‌ ತಂಡಕ್ಕೆ ಮರಳಿದ ತ್ರಿಶತಕದ ಸರದಾರ ಕರುಣ್‌ ನಾಯರ್

TATA IPL 2025:ಸೋಲಿನ ನೋವಿನಲ್ಲಿದ್ದ ಆರ್‌ಸಿಬಿ ಅಭಿಮಾನಿಗಳಿಗೆ Good News,ಬಂದ್ಬಿಟ್ಟ ಭರವಸೆಯ ಬೌಲರ್‌

ಮುಂದಿನ ಸುದ್ದಿ
Show comments