Select Your Language

Notifications

webdunia
webdunia
webdunia
webdunia

ಧೋನಿ ಅಭಿಮಾನಿಗಳಿಗೆ ಸಾಂತ್ವನಿಸುವ ಕೆಲಸ ಮಾಡಿದ ಆಯ್ಕೆಗಾರರು

ಧೋನಿ ಅಭಿಮಾನಿಗಳಿಗೆ ಸಾಂತ್ವನಿಸುವ ಕೆಲಸ ಮಾಡಿದ ಆಯ್ಕೆಗಾರರು
ಮುಂಬೈ , ಶನಿವಾರ, 31 ಆಗಸ್ಟ್ 2019 (09:37 IST)
ಮುಂಬೈ: ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಧೋನಿಯನ್ನು ಆಯ್ಕೆ ಮಾಡದೇ ಇರುವುದನ್ನು ನೋಡಿ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ವಿಶ್ವಕಪ್ ವಿಜೇತ  ನಾಯಕನನ್ನು ಬೇಕೆಂದೇ ಕಡೆಗಣಿಸಲಾಗುತ್ತಿದೆ ಎಂದು ಅಭಿಮಾನಿಗಳು ಕಿಡಿ ಕಾರಿದ್ದಾರೆ.


ಹೀಗಾಗಿ ಇದೀಗ ಟೀಂ ಇಂಡಿಯಾ ಆಯ್ಕೆಗಾರರು ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದು, ಧೋನಿಯನ್ನು ಬೇಕೆಂದೇ ಕಡೆಗಣಿಸಿಲ್ಲ ಎಂದು ಸಾಂತ್ವನಿಸುವ ಕೆಲಸ ಮಾಡಿದ್ದಾರೆ.

‘ಧೋನಿಯನ್ನು ಕಡೆಗಣಿಸುತ್ತಿಲ್ಲ. ಬದಲಾಗಿ ಅವರೇ ನಮಗೆ ಮುಂದಿನ ವಿಕೆಟ್ ಕೀಪರ್ ನ್ನು ತಯಾರು ಮಾಡಲು ಎರಡು ವರ್ಷಗಳ ಸಮಯ ನೀಡಿದ್ದಾರೆ. ಇನ್ನೊಬ್ಬ ಯುವ ವಿಕೆಟ್ ಕೀಪರ್ ನ್ನು ತಯಾರು ಮಾಡಲು ಧೋನಿ ಸಮಯ ಕೊಟ್ಟಿದ್ದಾರೆ. ವೆಸ್ಟ್ ಇಂಡೀಸ್ ಸರಣಿಗೂ ಮೊದಲು ಅವರು ಎರಡು ತಿಂಗಳ ಬಿಡುವು ಬೇಕೆಂದು ಕೇಳಿದ್ದರು. ಅದರಂತೇ ನಾವು ಲೆಕ್ಕಾಚಾರ ತಪ್ಪಿಲ್ಲ. ಎರಡು ತಿಂಗಳು ಅವರು ಆಯ್ಕೆಗೆ ಲಭ್ಯರಿಲ್ಲ ಅಷ್ಟೇ’ ಎಂದು ಆಯ್ಕೆಗಾರರು ವಿವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೆಸ್ಟ್ ಇಂಡೀಸ್ ವಿರುದ್ಧ ದ್ವಿತೀಯ ಟೆಸ್ಟ್ ನಲ್ಲಿ ಮಿಂಚಿದ ಮಯಾಂಕ್, ಕಳೆಗುಂದಿದ ಕೆಎಲ್ ರಾಹುಲ್