Publish Date: Mon, 05 Dec 2022 (08:20 IST)
Updated Date: Mon, 05 Dec 2022 (08:44 IST)
ಢಾಕಾ: ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿ ಆಡಲು ತೆರಳಿದ ಟೀಂ ಇಂಡಿಯಾದಿಂದ ರಿಷಬ್ ಪಂತ್ ರನ್ನು ದಿಡೀರ್ ಆಗಿ ರಿಲೀಸ್ ಮಾಡಲಾಗಿದೆ.
ರಿಷಬ್ ಪಂತ್ ಬದಲಿಗೆ ನಿನ್ನೆಯ ಪಂದ್ಯದಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಸಲಿಗೆ ರಿಷಬ್ ರನ್ನು ತಂಡದಿಂದ ಕೈ ಬಿಟ್ಟಿದ್ದೇಕೆ ಎಂದು ಬಿಸಿಸಿಐ ಸ್ಪಷ್ಟ ಕಾರಣ ನೀಡಿಲ್ಲ.
ಬದಲಾಗಿ ವೈದ್ಯಕೀಯ ಕಾರಣಗಳಿಗೆ ರಿಲೀಸ್ ಮಾಡಲಾಗಿದೆ ಎಂಬ ಸುದ್ದಿಗಳಿವೆ. ಡಿಸೆಂಬರ್ 14 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿ ವೇಳೆ ಅವರು ತಂಡ ಕೂಡಿಕೊಳ್ಳಲಿದ್ದಾರೆ.