RCB: ಆರ್ ಸಿಬಿ ಮಾಲಿಕರು ನಿಜಕ್ಕೂ ಯಾರು, ತಂಡಕ್ಕೆ ಈ ಹೆಸರು ಬಂದಿದ್ದು ಹೇಗೆ ಇಲ್ಲಿದೆ ವಿವರ

Krishnaveni K
ಶುಕ್ರವಾರ, 6 ಜೂನ್ 2025 (11:38 IST)
Photo Credit: X
ಬೆಂಗಳೂರು: ಐಪಿಎಲ್ ನಲ್ಲಿ ನಮ್ಮ ಬೆಂಗಳೂರು ತಂಡ ಆರ್ ಸಿಬಿ ಎಂದು ಎಷ್ಟೋ ಜನ ಅಂಧ ಅಭಿಮಾನಿಗಳಿದ್ದಾರೆ. ಈ ಬಾರಿ ಕಪ್ ಗೆದ್ದ ಮೇಲಂತೂ ಅವರ ಅಭಿಮಾನ ಹೆಚ್ಚಾಗಿದೆ. ಇದೇ ಅಂಧಾಭಿಮಾನಕ್ಕೆ ಸಿಲುಕಿ ಈಗ ಕಾಲ್ತುಳಿತವಾಗಿ 11 ಮಂದಿಯ ಪ್ರಾಣ ಹೋಗಿದೆ. ಅಷ್ಟಕ್ಕೂ ಈ ಆರ್ ಸಿಬಿ ತಂಡದ ಮಾಲಿಕರು ಯಾರು, ತಂಡಕ್ಕೆ ಈ ಹೆಸರು ಬಂದಿದ್ದು ಹೇಗೆ ಇಲ್ಲಿದೆ ವಿವರ.

ಆರ್ ಸಿಬಿ ತಂಡ ಮೊದಲು ಕನ್ನಡಿಗರೇ ಆದ ಉದ್ಯಮಿ ವಿಜಯ್ ಮಲ್ಯ ಒಡೆತನದಲ್ಲಿತ್ತು. ಆದರೆ ಸಾವಿರಾರು ಕೋಟಿ ಸಾಲ ಮಾಡಿ ಲಂಡನ್ ಗೆ ಪರಾರಿಯಾಗುವ ಮುನ್ನ ವಿಜಯ್ ಮಲ್ಯ ತಮ್ಮ ಕಂಪನಿ ಯುನೈಟೆಡ್ ಬ್ಯೂವರಿಸ್ ನ್ನು ಬ್ರಿಟನ್ ಮೂಲದ ಡಿಯಾಜಿಯೋ ಕಂಪನಿಗೆ ಮಾರಾಟ ಮಾಡಿತು.

ಯುನೈಟೆಡ್ ಬ್ರೂವರಿಸ್ ಕಂಪನಿಯ ಒಂದು ವಿಸ್ಕಿಯ ಹೆಸರು ರಾಯಲ್ ಚಾಲೆಂಜ್ ಎಂಬುದಾಗಿದೆ. ಇದೇ ವಿಸ್ಕಿಯ ಹೆಸರಿಟ್ಟುಕೊಂಡೇ ಆರ್ ಸಿಬಿ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರು ಬಂತು.

ಅದೇ ಕಂಪನಿಯೇ ಆರ್ ಸಿಬಿ ಫ್ರಾಂಚೈಸಿಯ ಮಾಲಿಕರಾಗಿದ್ದಾರೆ. ಈ ಹಿಂದೆ ವಿಜಯ್ ಮಲ್ಯ ಇಡೀ ತಂಡವನ್ನು ವಿಸರ್ಜಿಸಿದಾಗಲೂ ಕೊಹ್ಲಿಯನ್ನು ಉಳಿಸಿಕೊಂಡಿದ್ದರು. ಈಗ ಕೊಹ್ಲಿ ಎಂಬ ಹೆಸರಿಗೆ ಬೆಲೆಕಟ್ಟಲಾಗದ ಮೌಲ್ಯವಿದೆ.  ಈ ಕಾರಣಕ್ಕೆ ಆರ್ ಸಿಬಿ ಮಾಲಿಕರೂ ಕೊಹ್ಲಿಯನ್ನು ಇದುವರೆಗೆ ಬಿಟ್ಟುಕೊಟ್ಟಿಲ್ಲ. ಇಲ್ಲಿನ ಅಭಿಮಾನಿಗಳ ಮೇಲಿನ ಪ್ರೀತಿಗೆ ಕೊಹ್ಲಿಯೂ ಈ ತಂಡವನ್ನು ಬಿಟ್ಟುಹೋಗಲ್ಲ ಎಂದಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್ ಸ್ಥಿತಿ ಗಂಭೀರ: ಪೋಷಕರ ತೀರ್ಮಾನವೇನು ಗೊತ್ತಾ

ಶ್ರೇಯಸ್ ಅಯ್ಯರ್ ಆರೋಗ್ಯ ಸ್ಥಿತಿ ಗಂಭೀರ: ಐಸಿಯುವಿನಲ್ಲಿ ಚಿಕಿತ್ಸೆ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಆಡುವ ಮುಂದಿನ ಪಂದ್ಯ ಯಾವಾಗ ಇಲ್ಲಿದೆ ಡೀಟೈಲ್ಸ್

ಟೀಂ ಇಂಡಿಯಾಗೆ ಮತ್ತೆ ಶುರು ಹರ್ಷಿತ್ ರಾಣಾ ತಲೆನೋವು

Womens World Cup:ಧಾರಾಕಾರ ಮಳೆಗೆ ಕೊಚ್ಚಿ ಹೋದ ಭಾರತ–ಬಾಂಗ್ಲಾದೇಶ ಪಂದ್ಯ

ಮುಂದಿನ ಸುದ್ದಿ
Show comments